ಜ್ಞಾನ ವೃದ್ಧಿಸಿಕೊಳ್ಳಲು ವಕೀಲರಿಗೆ ತರಬೇತಿ ಅಗತ್ಯ
Update: 2016-03-15 23:51 IST
ಉಡುಪಿ, ಮಾ.15: ಯುವ ವಕೀಲರಿಗೆ ಕಾಲಕಾಲಕ್ಕೆ ತರಬೇತಿಗಳು ಅತ್ಯಗತ್ಯ. ಇದರಿಂದ ಜ್ಞಾನವನ್ನು ವೃದ್ಧಿಸಿಕೊಳ್ಳಬಹುದಾಗಿದ್ದು, ಮುಂದೆ ನ್ಯಾಯಾಧೀಶರ ಪರೀಕ್ಷೆ ಬರೆಯಲು ಇದು ಬಹಳಷ್ಟು ಸಹಕಾರಿಯಾಗಲಿದೆ ಎಂದು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಿವಶಂಕರ ಅಮರ ಣ್ಣವರ್ ಹೇಳಿದ್ದಾರೆ.
ರಾಜ್ಯ ಬಾರ್ ಕೌನ್ಸಿಲ್ ಲಾ ಅಕಾಡ ಮಿಯ ಆಶ್ರಯದಲ್ಲಿ ಉಡುಪಿ, ಕುಂದಾಪುರ ಹಾಗೂ ಕಾರ್ಕಳ ವಕೀ ಲರ ಸಂಘ, ಕುಂಜಿಬೆಟ್ಟು ವೈಕುಂಠ ಬಾಳಿಗಾ ಕಾನೂನು ವಿದ್ಯಾಲಯದ ಸಹಯೋಗದೊಂದಿಗೆ ವಿದ್ಯಾಲಯದ ಸಭಾಂಗಣದಲ್ಲಿ ಯುವ ವಕೀಲರಿಗಾಗಿ ಹಮ್ಮಿಕೊಳ್ಳಲಾದ ತರಬೇತಿ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತ ನಾಡಿದರು. ರತ್ನಾಕರ ಹೆಗ್ಡೆ, ಬಿ.ಎಂ. ವಾರಂಬಳ್ಳಿ, ಬಿ.ಜಿ. ಶಂಕರಮೂರ್ತಿ ಉಪನ್ಯಾಸ ನೀಡಿದರು.