ಪುತ್ತೂರು : ರೈಲ್ವೇ ಅಂಡರ್ ಪಾಸ್ ವ್ಯವಸ್ಥೆಗೆ ಮನವಿ
Update: 2016-03-17 17:09 IST
ಪುತ್ತೂರು: ಪುತ್ತೂರಿನ ಎಪಿಎಂಸಿ ರಸ್ತೆಯಲ್ಲಿನ ರೈಲ್ವೇ ಲೆವೆಲ್ ಕ್ರಾಸಿಂಗ್ಗೆ ಪರ್ಯಾಯವಾಗಿ ಅಂಡರ್ಪಾಸ್ ನಿರ್ಮಾಣಗೊಳಿಸುವಂತೆ ಜಯ ಕರ್ನಾಟಕ ಯುವ ಘಟಕದ ವತಿಯಿಂದ ಪುತ್ತೂರು ಶಾಸಕಿ ಶಕುಂತಳಾ ಟಿ. ಶೆಟ್ಟಿಯವರಿಗೆ ಗುರುವಾರ ಮನವಿ ನೀಡಲಾಯಿತು. ಜಯಕರ್ನಾಟಕ ಸಂಘಟನೆಯ ಮುಖಂಡರಾದ ನೆಲ್ಲಿಕಟ್ಟೆ ಹರಿಪ್ರಸಾದ್ ಶೆಟ್ಟಿ, ಶರತ್ ಆಳ್ವ, ಮನೋಜ್, ಲೊಕೇಶ್ ಗೌಡ, ರಂಜಿತ್, ಸುದರ್ಶನ ರೈ ಮತ್ತು ಅಲ್ವಿನ್ ಗಲ್ಬಾವೊ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.