×
Ad

ಎತ್ತಿನ ಹೊಳೆ ಡಿ.ವಿ ಹೇಳಿಕೆ ಖೇದಕರ-ಜನಾರ್ದನ ಪೂಜಾರಿ

Update: 2016-03-23 18:31 IST

 ಮಂಗಳೂರು.ಮಾ.23:ಎತ್ತಿನಹೊಳೆ ಯೋಜನೆಯಿಂದ ಪಶ್ಚಿಮ ಘಟ್ಟ ಅಥವಾ ಕರಾವಳಿಗೆ ಯಾವೂದೆ ಹಾನಿಯಾಗುವುದಿಲ್ಲ ಎಂದು ಕೇಂದ್ರ ಸರಕಾರದ ಕಾನೂನು ಸಚಿವರ ಹೇಳಿಕೆ ನೀಡಿರುವುದು ಖೇದಕರ ಎಂದು ಕೇಂದ್ರ ಸರಕಾರದ ಮಾಜಿ ವಿತ್ತ ಸಚಿವ ಜನಾರ್ದನ ಪೂಜಾರಿ ಸುದ್ದಿಗೋಷ್ಠಿಯಲ್ಲಿಂದು ಟೀಕಿಸಿದ್ದಾರೆ.

 ರಾಜ್ಯದ ಮಾಜಿ ಮುಖ್ಯ ಮಂತ್ರಿ ಹಾಲಿ ಕೇಂದ್ರ ಸರಕಾರದ ಕಾನೂನು ಸಚಿವರು ಈ ರೀತಿಯ ಹೇಳಿಕೆ ನೀಡುತ್ತಿರುವುದು ಅವರಿಗೆ ಮಾಹಿತಿಯ ಕೊರತೆ ಇದೆ ಎನ್ನುವುದನ್ನು ಸೂಚಿಸುತ್ತದೆ.ಭಾರತ ಸರಕಾರಕ್ಕೆ ಅರಣ್ಯ ಮತ್ತು ಪರಿಸರ ಇಲಾಖೆ 2010ರಲ್ಲಿ ಅಧ್ಯಯನ ನಡೆಸಿ ಭಾರತದ ಹಾವಾಮಾನ ಬದಲಾವಣೆ ಹಾಗೂ ಮಳೆ ಪ್ರಮಾಣ ಏರಿಳಿತಕ್ಕೆ ಕಾರಣವಾಗುವ ಅಂಶಗಳ ಬಗ್ಗೆ ಆಳವಾಗಿ ಅಧ್ಯಯನ ನಡೆಸಿದ ವರದಿಯನ್ನು ನೀಡಿದೆ.ಈ ವರದಿಯಲ್ಲಿ ಭಾರತದ ಹಿಮಾಲಯ ಪ್ರದೇಶ,ಕರಾವಳಿ ಈಶಾನ್ಯ ರಾಜ್ಯಗಳಲ್ಲಿ ಮಳೆಯ ಪ್ರಮಾಣದ ಏರಿಳಿತ ,ಹವಾಮಾನ ಬದಲಾವಣೆಯ ಕಾರಣವಾಗುವ ಅಂಶಗಳ ಬಗ್ಗೆ ಸ್ಪಷ್ಟವಾಗಿ ತಿಳಿಸಲಾಗಿದೆ.ಈ ವರದಿಯಲ್ಲಿ ಎತ್ತಿನ ಹೊಳೆಯ ರೀತಿಯ ಯೋಜನೆಯಿಂದ ಪರಿಸರದ ಮೇಲಾಗುವ ಪರಿಣಾಮದ ಬಗ್ಗೆ ತಿಳಿಸಲಾಗಿದ್ದರೂ ಸರಕಾರದ ಈ ಯೋಜನೆಯನ್ನು ಮುಂದುವರಿಸಲು ಹೊರಟಿರುವುದು ಸರಿಯಲ್ಲ.ಈ ವರದಿಯ ಬಗ್ಗೆ ಕೇಂದ್ರದ ಕಾನೂನು ಸಚಿವರಿಗೆ ತಿಳಿದಿಲ್ಲ ಎನ್ನುವುದು ಆಶ್ಚರ್ಯವನ್ನುಂಟು ಮಾಡುತ್ತದೆ.ಎತ್ತಿನ ಹೊಳೆ ಯೋಜನೆಯ ಸಾಧಕ-ಬಾಧಕಗಳನ್ನು ಗಮನಿಸಿ ನಾನು ಮುಖ್ಯ ಮಂತ್ರಿಯಾಗಿದ್ದಾಗ ಅನುಮತಿ ನೀಡಿದ್ದೇನೆ ಎನ್ನುವ ಮಾಜಿ ಮುಖ್ಯ ಮಂತ್ರಿ ಡಿ.ವಿ.ಸದಾನಂದ ಗೌಡರು ,ರಾಜ್ಯದ ಮಾಜಿ  ಮುಖ್ಯ ಮಂತ್ರಿ ವೀರಪ್ಪ ಮೊಯಿಲಿ ಪರಿಸರದ ಮೇಲಾಗಬಹುದಾದ ಪರಿಣಾಮದ ಬಗ್ಗೆ ತಜ್ಞರು ಸರಕಾರಕ್ಕೆ ಸಲ್ಲಿಸಿದ ವರದಿಯನ್ನು ಓದಿಲ್ಲವೆ ?ಎಂದು ಜನಾರ್ದನ ಪೂಜಾರಿ ಪ್ರಶ್ನಿಸಿದರು.ಬಯಲು ಸೀಮೆಯಲ್ಲಿ ನೀರಿನ ಸಮಸ್ಯೆ ನೀಗಿಸಲು ಸರಕಾರ ಪರ್ಯಾಯ ಯೋಜನೆಯನ್ನು ಕೈ ಗೊಳ್ಳಬೇಕಾಗಿದೆ.ದೇಶದಲ್ಲಿ ನೀರಿನ ಬರ ನೀಗಿಸಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ ೆ ಅವುಗಳಲ್ಲಿ ಮಳೆ ನೀರಿನ ಕೊಯ್ಲ ನಂತಹ ಯೋಜನೆಗಳಿಗೆ ಸರಕಾರ ಪ್ರೋತ್ಸಾಹ ನೀಡಬೇಕಾಗಿದೆ ಎಂದು ಜನಾರ್ದನ ಪೂಜಾರಿ ತಿಳಿಸಿದರು.
 ರಾಜ್ಯದಲ್ಲಿ ಭೃಷ್ಟಾಚಾರ ನಿಗ್ರಹ ದಳ ರಚನೆಯ ತೀರ್ಮಾನವನ್ನು ಸರಕಾರ ಹಿಂದಕ್ಕೆ ಪಡೆಯಬೇಕು:-ಸರಕಾರ ಈಗಾಗಲೆ ಭೃಷ್ಟಾಚಾರ ನಿಗ್ರಹದಳವನ್ನು ರಚನೆ ಮಾಡಲು ಕೈ ಗೊಂಡ ತೀರ್ಮಾನವನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು.ಈ ವಿಚಾರದಲ್ಲಿ ಸರಕಾರದ ಹಠಮಾರಿ ಧೋರಣೆ ಬೇಡ ಈ ವಿಚಾರದಲ್ಲಿ ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ,ಅಥವಾ ಜಗದೀಶ್ ಶೆಟ್ಟರ್ ರವರಿಗೆ ಮಾತನಾಡುವ ನೈತಿಕ ಹಕ್ಕು ಇಲ್ಲ ಎಂದು ಎಂದು ಜನಾರ್ದನ ಪೂಜಾರಿ ತಿಳಿಸಿದರು.
ಕೇಂದ್ರ ಸರಕಾರ ಲೋಕಪಾಲ್,ಸಿಬಿಐಗೆ ಸ್ವಯತ್ತತೆ ನೀಡಲಿ:-ಕೇಂದ್ರ ಸರಕಾರ ಮೊದಲು ಜನಲೋಕಪಾಲ್ ಮಸೂದೆಯನ್ನು ಜಾರಿಗೆ ತರಲಿ ಹಾಗೂ ಸಿಬಿಐಗೆ ಸ್ವಾಯತ್ತತೆ ನೀಡಲಿ.ಈ ಕೆಲಸವನ್ನು ಮಾಡದೆ ರಾಜ್ಯ ಸರಕಾರವನ್ನು ಟೀಕೆ ಮಾಡುವ ನೈತಿಕತೆ ಬಿಜೆಪಿಗಿಲ್ಲ.ರಾಜ್ಯದಲ್ಲಿ ಮಾದರಿಯಾಗಿ ಕಾರ್ಯನಿರ್ವಹಣೆ ಮಾಡಿದ ಲೋಕಾಯುಕ್ತ ದೇಶಕ್ಕೆ ಮಾದರಿಯಾಗಿತ್ತು.ಅದೇ ರೀತಿಯಲ್ಲಿ ಕೇಂದ್ರದಲ್ಲಿ ಜನ ಲೋಕಪಾಲ್ ಮಸೂದೆಯನ್ನು ಜಾರಿಗೆ ತರಲಿ ಎಂದು ಜನಾರ್ದನ ಪೂಜಾರಿ ತಿಳಿಸಿದರು.

     ಮಹಾಲೀಗೇಶ್ವರನೆ ಬುದ್ಧಿ ನೀಡಲಿ:-ಪುತ್ತೂರು ಜಾತ್ರೆಯ ಆಮಂತ್ರಣ ಪತ್ರದಲ್ಲಿ ಜಿಲ್ಲಾಧಿಕಾರಿಯ ಹೆಸರು ನಮೂದಿಸಿರುವುದಕ್ಕೆ ವಿವಾದ ಉಂಟು ಮಾಡುತ್ತಿರುವವರಿಗೆ ಮಹಾಲಿಂಗೇಶ್ವರನೆ ಬುದ್ದಿ ನೀಡಲಿ ಎಂದು ಜನಾರ್ದನ ಪೂಜಾರಿ ತಿಳಿಸಿದರು.  ಭಾರತದ ಸಂವಿಧಾನದಲ್ಲಿ ಜಾತಿ ಧರ್ಮದ ವಿಚಾರದಲ್ಲಿ ತಾರತಮ್ಯ ಮಾಡಲು ಅವಕಾಶವಿಲ್ಲ ;ಒಂದು ವೇಳೆ ಆ ರೀತಿಯ ನಿಯಮಗಳನ್ನು ಮುಜರಾಯಿ ಇಲಾಖೆಯಲ್ಲಿ ರಚಿಸಿದ್ದರೆ ಅದು ಸಂವಿಧಾನಕ್ಕೆ ವಿರುದ್ಧವಾದುದು ಎಂದು ಜನಾರ್ದನ ಪೂಜಾರಿ ತಿಳಿಸಿದರು.

ಸುದ್ದಿ ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಉಮೇಶ್ಚಂದ್ರ, ಟಿ.ಕೆ.ಸುದೀರ್, ಅರುಣ್ ಕುವೆಲ್ಲೋ ,ಈಶ್ವರ ಉಳ್ಳಾಲ್,ಬಿ.ಕೆ.ಇದಿನಬ್ಬ,ಎ.ಸಿ.ವಿನಯ ರಾಜ್,ಕರುಣಾಕರ ಶೆಟ್ಟಿ,ರಮಾನಂದ ಪೂಜಾರಿ,ನೀರಜ್ ಪಾಲ್,ಮನೀಶ್ ಬೊಳಾರ್,ಹಕೀಂ ಕೂಳೂರು,ಸಲೀಂ ಕುದ್ರೋಳಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News