ನೀರಿಗೆ ಬಿದ್ದು ಮೀನುಗಾರ ಮೃತ್ಯು
Update: 2016-03-23 23:53 IST
ಮಲ್ಪೆ, ಮಾ.23: ಮಲ್ಪೆ ಬಂದರಿನ ದಕ್ಕೆಯಲ್ಲಿ ಬೋಟಿನೊಳಗೆ ಬಲೆ ದುರಸ್ತಿ ಕೆಲಸ ಮಾಡಿಕೊಂಡಿದ್ದ ಮೀನುಗಾರರೊಬ್ಬರು ಆಕಸ್ಮಿಕವಾಗಿ ಕಾಲುಜಾರಿ ನದಿಗೆ ಬಿದ್ದು ಮೃತಪಟ್ಟ ಘಟನೆ ಮಾ.21ರಂದು ಸಂಜೆ ನಡೆದಿದೆ.
ಮೃತರನ್ನು ಅವಲ ಶ್ರೀನು(41) ಎಂದು ಗುರುತಿಸಲಾಗಿದೆ. ಸಂಜೆ ಅಕಸ್ಮಿಕವಾಗಿ ನೀರಿಗೆ ಬಿದ್ದಾಗ ದೋಣಿಯಲ್ಲಿದ್ದ ಉಳಿದವರು ಹುಡುಕಾಡಿದರೂ ಪತ್ತೆಯಾಗದ ಅವರ ಮೃತದೇಹ ಮಂಗಳವಾರ ಅಪರಾಹ್ನ ಮಲ್ಪೆ ಬಂದರಿನ ಬಳಿ ನದಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.