×
Ad

ಕಾಸರಗೋಡು: ಮಾ.27ರಂದು ವಿಶ್ವ ರಂಗ ದಿನಾಚರಣೆ

Update: 2016-03-24 14:41 IST

ಕಾಸರಗೋಡು, ಮಾ.24: ಕರ್ನಾಟಕ ನಾಟಕ  ಅಕಾಡಮಿಯ  ಪ್ರಾಯೋಜಕತ್ವದಲ್ಲಿ   ಕಲಾ ಸಂಘ   ಪ್ರತಿಷ್ಠಾನ ಸಹಯೋಗದೊಂದಿಗೆ   ವಿಶ್ವರಂಗ  ದಿನಾಚರಣೆ ಮಾ. 27 ರಂದು ಪಿಲಿಕುಂಜೆ ಸಂಧ್ಯಾರಾಗಂಬಯಲು ರಂಗ ಮಂದಿರದಲ್ಲಿ ನಡೆಯಲಿದೆ .

 ಸಂಜೆ 5.30 ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ರಂಗ ನಿರ್ದೆಶಕ  ಪ್ರದೀಪ್ ಚಂದ್ರ ಕುತ್ಪಾಡಿ  ಉದ್ಘಾಟಿಸುವರು .

ಹಿರಿಯ ರಂಗ ಕಲಾವಿದ  ಎಸ್ . ಜಗನ್ನಾಥ ಶೆಟ್ಟಿ ಅಧ್ಯಕ್ಷೆತೆ  ವಹಿಸುವರು . ಬಳಿಕ  ರಂಗ ಭೂಮಿ  ಉಡುಪಿ ಕಲಾವಿದರಿಂದ  ನಾಗಮಂಡಲ  ಕನ್ನಡ ನಾಟಕ ಪ್ರದರ್ಶನ ನಡೆಯಲಿದೆ . ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ನಾಟಕ ಅಕಾಡಮಿ ಸದಸ್ಯ  ಉಮೇಶ್  ಸಾಲಿಯಾನ್ , ದಿವಾಕರ , ಭಾರತಿ ಬಾಬು , ಸುರೇಖಾ ದಿವಾಕರ್ ,ಜಗನ್ನಾಥ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News