ಮಾ. 25ರಂದು ವಲಚ್ಚಿಲ್ ಪದವಿನಲ್ಲಿ 'ಐಕ್ಯತೆ ಕಾಲದ ಬೇಡಿಕೆ'
Update: 2016-03-25 12:03 IST
ಫರಂಗಿಪೇಟೆ, ಮಾ. 25: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವಲಚ್ಚಿಲ್ ಪದವು ವತಿಯಿಂದ 'ಐಕ್ಯತೆ ಕಾಲದ ಬೇಡಿಕೆ' ಎಂಬ ಕಾರ್ಯಕ್ರಮ
ಇಂದು ಸಂಜೆ 7 ಗಂಟೆಗೆ ಟಿಪ್ಪು ನಗರ ಕೇಂದ್ರ ಮೈದಾನ ವಲಚ್ಚಿಲ್ ಪದವಿನಲ್ಲಿ ಹಮ್ಮಿಕೊಳ್ಳಲಾಗಿದೆ.
ಮುಖ್ಯ ಭಾಷಣಗಾರರಾಗಿ ಶಾಫಿ ಬೆಳ್ಳಾರೆ ಪಿ.ಎಫ್.ಐ ರಾಜ್ಯ ಸಮಿತಿ ಸದಸ್ಯರು ಆಗಮಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಹನೀಫ್ ಕಾಟಿಪಳ್ಳ ಅಧ್ಯಕ್ಷರು ಪಿ.ಎಫ್.ಐ. ಮಂಗಳೂರು, ಬಶೀರ್ ಬಜಾಲ್ ವಲಯ ಪಿ.ಎಫ್.ಐ ಅದ್ಯಕ್ಷರು ಮಂಗಳೂರು,
ಅಬ್ದುಲ್ ರಶೀದ್ ವಲಯ ಅಧ್ಯಕ್ಷರು ಪಿ.ಎಫ್.ಐ ಅರ್ಕುಳ, ನಝೀರ್ ಅಧ್ಯಕ್ಷರು ಜುಮಾ ಮಸೀದಿ ವಳಚ್ಚಿಲ್ ಪದವು ಮತ್ತು ಯಾಸೀನ್ ಅಧ್ಯಕ್ಷರು ಎಸ್.ಡಿ.ಪಿ.ಐ ಅರ್ಕುಳ ಗ್ರಾಮ ಸಮಿತಿ ಮುಂತಾದವರು ಭಾಗವಹಿಸಿಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.