×
Ad

ಕಾಸರಗೋಡು : ಜಿಲ್ಲೆಯ ಎಲ್ಲಾ ಕ್ರೈಸ್ತ ದೇವಾಲಯಗಳಲ್ಲಿ ವಿಶೇಷ ಪ್ರಾರ್ಥನೆ

Update: 2016-03-25 19:03 IST

ಕಾಸರಗೋಡು :  ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಿದ ದಿನದ ಸ್ಮರಣಾರ್ಥ  ಕ್ರೈಸ್ತ ಬಾಂಧವರು  ಶುಭ ಶುಕ್ರವಾರ ವನ್ನು  ಭಕ್ತಿ , ಶ್ರದ್ದೆ ಯಿಂದ ಆಚರಿಸಿದರು.
ಕಾಸರಗೋಡು ಜಿಲ್ಲೆಯ ಎಲ್ಲಾ ಕ್ರೈಸ್ತ ದೇವಾಲಯಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು.
ಕಯ್ಯಾರು ಕ್ರಿಸ್ತರಾಜ ದೇವಾಲಯದಲ್ಲಿ ನಡೆದ ಧಾರ್ಮಿಕ ವಿಧಿ - ವಿಧಾನ ವನ್ನು  ಧರ್ಮಗುರು ವಂ .  ವಿಕ್ಟರ್ ಡಿ ಸೋಜ ನೆರವೇರಿಸಿದರು. 
ಬೇಳಾ,  ಕೊಲ್ಲಂಗಾನ, ಕಾಸರಗೋಡು , ಕುಂಬಳೆ , ನಾರಾಂಪಾಡಿ, ಉಕ್ಕಿನಡ್ಕ, ಮಣಿಯ೦ಪಾರೆ, ಮಂಜೇಶ್ವರ , ತಲಪಾಡಿ , ವರ್ಕಾಡಿ , ಪಾವೂರು , ಮೀಯಪದವು  ಚರ್ಚ್ ಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು.
ಚರ್ಚ್ ಮತ್ತು ಚರ್ಚ್ ಆವರಣದಲ್ಲಿ  ಯೇಸು ಕ್ರಿಸ್ತರ  ಶಿಲುಬೆಯ  ಮರಣ ಶಿಕ್ಷೆ ವಿಧಿಸಿದ್ದಲ್ಲಿಂದ ತೊಡಗಿ  ಅವರು ಶಿಲುಬೆ ಯಲ್ಲಿ  ಮರಣಿಸಿ ಸಮಾಧಿ ಮಾಡುವಲ್ಲಿನ  14 ಪ್ರಮುಖ ಘಟನಾವಳಿ ಗೆ   ಸಂಬಂಧಿಸಿ  'ಶಿಲುಬೆಯ ಹಾದಿ ' ಆಚ ರಿಸುವ  ಮೂಲಕ  ಯೇಸುಕ್ರಿಸ್ತರು ಅನುಭವಿಸಿದ ಕಷ್ಟ - ಸಂಕಷ್ಟಗಳ ಸ್ಮರಣೆ ಮಾಡಲಾಯಿತು.
ಶುಭ ಶುಕ್ರವಾರ ದಂದು  ಧ್ಯಾನ ಮತ್ತು  ಉಪವಾಸ ಮೂಲಕ ಕ್ರೈಸ್ತ ಬಾಂಧವರು ಪ್ರಾರ್ಥನಾ  ದಿನವಾಗಿ ಆಚರಿಸಿದರು.
ವಿಭೂತಿ ಬುಧವಾರದಿಂದ ಆರಂಭಗೊಂಡ 40 ದಿನಗಳ    ವ್ರತಾಚರಣೆಯ  ಕೊನೆಯ ದಿನಗಳನ್ನು ಪವಿತ್ರ ಸಪ್ತಾಹ ವನ್ನಾಗಿ ಆಚರಿಸಲಾಗುತ್ತಿದೆ . ಗರಿಗಳ ಭಾನುವಾರ ದಿಂದ  ಆರಂಭಗೊಳ್ಳುವ ಸಪ್ತಾಹ  ಈಸ್ಟರ್ ಭಾನುವಾರ ದೊಂದು  ಮುಕ್ತಾಯಗೊಳ್ಳುತ್ತದೆ.
ಗುರುವಾರ  ಯೇಸುಕ್ರಿಸ್ತರ  ಕೊನೆಯ ಭೋಜನ ದಿನವನ್ನು ಆಚರಿಸಲಾಗುತ್ತಿದೆ . ಮರುದಿನ ಯೇಸು ಕ್ರಿಸ್ತರು ಶಿಲುಬೆ ಗೇರಿಸಿದ ದಿನವನ್ನಾಗಿ ಶುಭ ಶುಕ್ರವಾರ ಆಚರಿಸಲಾಗುತ್ತಿದ್ದು, ಆದಿತ್ಯವಾರ ಯೇಸು ಕ್ರಿಸ್ತರು ಪುನರುತ್ಥಾನದ ಸ್ಮರಣೆಯಾಗಿ ಈಸ್ಟರ್ ಹಬ್ಬವನ್ನು ಆಚರಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News