ವಿಜಯ್‌ಕಾಂತ್‌ರಿಗೆ ಡಿಎಂಕೆ ಯಿಂದ 500ಕೋಟಿರೂ., 80 ಸೀಟುಗಳ ವಾಗ್ದಾನ: ವೈಕೋ

Update: 2016-03-26 09:54 GMT

ಮಧುರೈ, ಮಾರ್ಚ್.26: ಮುಂಬರುವ ತಮಿಳ್ನಾಡಿನ ವಿಧಾನಸಭಾ ಚುನಾವಣೆಯಲ್ಲಿ ತಮ್ಮೊಂದಿಗೆ ಸೇರಲು ಡಿಎಂಡಿಕೆ ನಾಯಕ ವಿಜಯ್‌ಕಾಂತ್‌ರಿಗೆ ಹಣ ಮತ್ತು ಸೀಟುಗಳಕೊಡುಗೆಯನ್ನು ಡಿಎಂಕೆ ಮತ್ತು ಬಿಜೆಪಿ ಪಕ್ಷಗಳು ಮುಂದಿಟ್ಟಿದ್ದವೆಂದು ವೈಕೋ ಹೇಳಿದ್ದಾರೆ. ಐನೂರು ಕೋಟಿರೂ. ಮತ್ತು ಎಂಬತ್ತು ಸೀಟುಗಳನ್ನು ವಿಜಯ್‌ಕಾಂತ್‌ರಿಗೆ ನೀಡುವುದಾಗಿ ಡಿಎಂಕೆ ಭರವಸೆ ನೀಡಿತ್ತು. ಅದೇ ವೇಳೆ ಬಿಜೆಪಿ ರಾಜ್ಯಸಭಾ ಸ್ಥಾನ ಮತ್ತು ಕೇಂದ್ರದಲ್ಲಿ ಸಚಿವ ಸ್ಥಾನದ ವಾಗ್ದಾನ ಮಾಡಿತ್ತೆಂಬ ಸ್ಫೋಟಕ ಸುದ್ದಿಯನ್ನು ಎಂಡಿಎಂಕೆ ನಾಯಕ ವೈಕೋ ಪತ್ರಕರ್ತರಿಗೆ ತಿಳಿಸಿದ್ದಾರೆ.
ಇವೆಲ್ಲವನ್ನು ತಿರಸ್ಕರಿಸಿ ವಿಜಯ್‌ಕಾಂತ್ ಭ್ರಷ್ಟಾಚಾರದ ವಿರುದ್ಧ ರೂಪು ನೀಡಲಾಗಿರುವ ಜನಕ್ಷೇಮ ಮೈತ್ರಿಕೂಟವನ್ನು ಸೇರಲು ತೀರ್ಮಾನಿಸಿದರೆಂದು ಅವರು ಹೇಳಿದ್ದಾರೆ. ವಿಜಯ್‌ಕಾಂತ್‌ರ ನೇತೃತ್ವದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತವನ್ನು ಜಾರಿಗೆ ತರಲಾಗುವುದೆಂದು ವೈಕೋ ಹೇಳಿದ್ದಾರೆ.
ಆರೋಪದ ಕುರಿತು ಸ್ಪಷ್ಟಪಡಿಸಬೇಕಿರುವುದು ವಿಜಯ್‌ಕಾಂತ್‌ರ ಪತ್ನಿ ಪ್ರೇಮಲತಾ ಇದರ ವಿರುದ್ಧ ಕೋರ್ಟ್‌ಗೆ ಹೋಗಲಿದ್ದೇವೆ ಎಂದು ಡಿಎಂಕೆ ನಾಯಕ ಎಂಕೆ ಸ್ಟಾಲಿನ್ ಹೇಳಿದ್ದಾರೆ
ಆದರೆ ವಿಜಯ್‌ಕಾಂತ್‌ರ ಪತ್ನಿ ಪ್ರೇಮಲತಾ ಈ ವಿಷಯದ ಕುರಿತು ಪ್ರತಿಕ್ರಿಯಿಸಲು ಸಿದ್ಧರಾಗಿಲ್ಲ.ವೈಕೋ ಹೇಳಿದ ವಿಷಯಗಳಿಗೆ ಅವರೇ ಪ್ರತಿಕ್ರಿಯೆ ನೀಡಬಹುದೆಂದು ಪ್ರೇಮಲತಾ ಹೇಳಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News