×
Ad

ಕಾಸರಗೋಡು : ಕೇರಳ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಹಕ್ಕು ಚಲಾವಣೆ ಕುರಿತು ಮತದಾರರಿಗೆ ಮಾಹಿತಿ ನೀಡಲು ಆದೇಶ

Update: 2016-03-28 21:27 IST


ಕಾಸರಗೋಡು : ಕೇರಳ ವಿಧಾನಸಭಾ ಚುನಾವಣೆ  ಹಿನ್ನಲೆಯಲ್ಲಿ  ಹಕ್ಕು ಚಲಾವಣೆ ಕುರಿತು  ಮತದಾರರಿಗೆ ಮಾಹಿತಿ ನೀಡಲು ಜಿಲ್ಲಾಧಿಕಾರಿ  ಮತ್ತು ತಾಲೂಕು ಕಛೇರಿಗಳಲ್ಲಿ ವ್ಯವಸ್ಥೆ ಕಲ್ಪಿಸಿದೆ. ರಾಜ್ಯ ಚುನಾವಣಾ ಆಯೋಗದ ಆದೇಶದಂತೆ   ಈ ವ್ಯವಸ್ಥೆ  ಮಾಡಲಾಗಿದೆ. ಚುನಾವಣಾ  ಉಸ್ತುವಾರಿ ಹೊಂದಿರುವ  ಉಪ ಜಿಲ್ಲಾಧಿಕಾರಿ ಆರ್ . ಪಿ ಮಹಾದೇವ್ ಕುಮಾರ್ ರವರ  ಸಾನಿಧ್ಯದಲ್ಲಿ ಮತಯ೦ತ್ರ  ದಲ್ಲಿ   ಹಕ್ಕು ಚಲಾವಣೆ ಕುರಿತು  ಮಾಹಿತಿ ನೀಡಲಾಯಿತು . ಮತಯ೦ತ್ರ  ದ  ಮೂಲಕ  ಮತ ಚಾಲಾಯಿಸುವ ರೀತಿ ಕುರಿತು ತಿಳುವಳಿಕೆ  ನೀಡಲಾಯಿತು. ಮಂಜೇಶ್ವರ , ಕಾನ್ಚಾ೦ಗಾಡ್  , ವೆಳ್ಳರಿಕುಂಡು  ತಾಲೂಕು ಕಚೇರಿ , ಹೆಚ್ಚುವರಿ ದಂಡಾಧಿಕಾರಿ ಕಚೇರಿಯಲ್ಲಿ  ಈ ವ್ಯವಸ್ಥೆ ಮಾಡಲಾಗಿದೆ . 
ಎಂ . ಸೀತಾರಾಮ , ಪಿ . ಮುಹಮ್ಮದ್  ನಿಸಾರ್ , ಎ . ವಿ  ರಾಜನ್  ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News