ರಿಕ್ಷಾ ತಂಗುದಾಣದ ಮೇಲ್ಛಾವಣಿ ಉದ್ಘಾಟನೆ
Update: 2016-03-28 18:28 GMT
ಮಣಿಪಾಲ, ಮಾ.2ಒ8: ಮಣಿಪಾಲ ಮಾಂಡವಿ ರಿಕ್ಷಾ ತಂಗುದಾಣದ ಮೇಲ್ಛಾವಣಿ ಉದ್ಘಾಟನೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು.
ಶಾಸಕ ಪ್ರಮೋದ್ ಮಧ್ವರಾಜ್ ಉದ್ಘಾಟಿಸಿ ಮಾತನಾಡಿದರು. ಮಣಿಪಾಲ ವಿವಿಯ ಉಪಕುಲಪತಿ ಡಾ.ಎಚ್.ಎಸ್.ಬಲ್ಲಾಳ್, ನಗರಸಭೆ ನಿಕಟಪೂರ್ವ ಅಧ್ಯಕ್ಷ ಪಿ.ಯುವರಾಜ್, ಉಪಾಧ್ಯಕ್ಷೆ ಅಮೃತ ಕೃಷ್ಣಮೂರ್ತಿ, ರಿಕ್ಷಾ ಚಾಲಕ ಮತ್ತು ಮಾಲಕರ ಸಂಘದ ಗೌರವಾಧ್ಯಕ್ಷ ರಮೇಶ್ ಕಾಂಚನ್, ಪೌರಾಯುಕ್ತ ಡಿ.ಮಂಜುನಾಥಯ್ಯ, ವಿವಿಯ ಸೆಕ್ಯುರಿಟಿ ಮೇಲ್ವಿಚಾರಕ ಡಾ. ಪ್ರಭುದೇವ ಮಾನೆ, ನಗರಸಭಾ ವಿಜಯ ಮಂಚಿ, ಸದಸ್ಯರಾದ ನಾರಾಯಣ ಕುಂದರ್, ಚಂದ್ರಕಾಂತ ನಾಯ್ಕಿ, ಸುಕೇಶ್ ಕುಂದರ್, ಸಂಘದ ಅಧ್ಯಕ್ಷ ಭರತ್ ತಿಂಗಳಾಯ, ಉಪಾಧ್ಯಕ್ಷರಾದ ಸತೀಶ್ ಮೆಂಡನ್, ಕಮಲಾಕ್ಷ ಪೂಜಾರಿ, ಪಾಂಡು ಪೂಜಾರಿ, ಸತೀಶ್ ಸಾಲಿಯಾನ್, ಪ್ರದೀಪ್ ಪೂಜಾರಿ, ಅರುಣ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಲೋಕೇಶ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.