×
Ad

ಎ.5: ‘ತುಳುನಾಡ ಸ್ವಾತಂತ್ರ ಪೊರ್‌ಂಬಾಟೊದ ನೆಂಪು’

Update: 2016-04-02 23:55 IST

ಮಂಗಳೂರು, ಎ.2: ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ವತಿಯಿಂದ ತುಳುನಾಡ ರಕ್ಷಣಾ ವೇದಿಕೆಯ ಸಹಯೋಗದಲ್ಲಿ ಉರ್ವಸ್ಟೋರ್‌ನ ತುಳುಭವನದಲ್ಲಿ ‘ಸಿರಿಚಾವಡಿ’ಯಲ್ಲಿ ಎ.5ರಂದು ಅಪರಾಹ್ನ 3:30ಕ್ಕೆ ದೇಶೀಯರ ಆಡಳಿತದ ವಿರುದ್ಧ ವಾಗಿ ನಡೆದ ‘ತುಳುನಾಡ ಸ್ವಾತಂತ್ರ ಪೊರ್‌ಂಬಾಟೊದ ನೆಂಪು’ ಕಾರ್ಯಕ್ರಮ ನಡೆಯಲಿದೆ.

ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷೆ ಎಂ. ಜಾನಕಿ ಬ್ರಹ್ಮಾವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಅರೆಭಾಷೆ ಸಂಸ್ಕೃತಿ ಅಕಾಡಮಿಯ ಮಾಜಿ ಅಧ್ಯಕ್ಷ ಎನ್. ಎಸ್. ದೇವಿ ಪ್ರಸಾದ್ ಸಂಪಾಜೆ ಕಾರ್ಯಕ್ರಮ ಉದ್ಘಾಟಿ ಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News