ಬಂಟ್ವಾಳ;ದೊಡ್ಡಪ್ಪನ ಹೊಡೆತಕ್ಕೆ ಗಾಯಗೊಂಡ ಬಾಲಕ ಮೃತ್ಯು

Update: 2016-04-03 11:33 GMT

ಬಂಟ್ವಾಳ: ಎ.3: ದೊಡ್ಡಪ್ಪನ ಹೊಡೆತಕ್ಕೆ ತೀವ್ರ ಗಾಯಗೊಂಡಿದ್ದ ವಿದ್ಯಾರ್ಥಿ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಸರಪಾಡಿಯಲ್ಲಿ ನಡೆದಿದೆ.

ಸರಪಾಡಿ ನಿವಾಸಿ ಗಣೇಶ್ ನಾಯ್ಕ್ ರಮಗ ಸಚಿನ್(16) ಮೃತಪಟ್ಟ ದುರ್ದೈವಿ.ಬಾಲಕನ ದೊಡ್ಡಪ್ಪ ಸುಂದರ ನಾಯ್ಕರು ತನ್ನ ಮೊಬೈಲ್ ಮತ್ತು ವಾಚ್ ಕಳವು ಮಾಡಿದ್ದಾನೆ ಎಂದು ಆರೋಪಿಸಿ ಕಳೆದ ರವಿವಾರ ಕೆನ್ನೆಗೆ ಹೊಡೆದಿದ್ದರು.

ಗಂಭೀರ ಗಾಯಗೊಂಡ ಬಾಲಕನನ್ನು ಮಂಗಳೂರಿನ ಖಾಸಗೀ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಇಂದು ಮಧ್ಯಹ್ನ ಮೃತಪಟ್ಟಿದ್ದಾನೆ. ಆರೋಪಿ ತಲೆಮರೆಸಿಕೊಂಡಿದ್ದು ತನಿಖೆ ಮುಂದುವರೆದಿದೆ. ಪ್ರಕರಣ  ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News