ಹೈದರಾಬಾದ್ ವಿವಿ ಮತ್ತೆ ಉದ್ವಿಗ್ನ
Update: 2016-04-06 23:43 IST
ಹೈದರಾಬಾದ್, ಎ.6: ಜನವರಿಯಲ್ಲಿ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾರ ಆತ್ಮಹತ್ಯೆಯ ಬಳಿಕ ಅಶಾಂತಿಯ ವಲಯವಾಗಿರುವ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ಇಂದು ಮುಂಜಾನೆ ಮತ್ತೆ ಪ್ರತಿಭಟನೆ ಆರಂಭವಾಗಿದೆ.
ಉಪಕುಲಪತಿ ಅಪ್ಪಾರಾವ್ ಪೋಡಿಲೆ ಯವರ ವಜಾಕ್ಕೆ ಆಗ್ರಹಿಸುತ್ತಿರುವ ವಿದ್ಯಾರ್ಥಿಗಳು ಕ್ಯಾಂಪಸ್ನ ಪ್ರವೇಶ ದ್ವಾರಗಳನ್ನು ಮುರಿದ ಕಾರಣ ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ಕೊಳ್ಳಲಾಗಿದೆ.