×
Ad

ಮಂಗಳೂರು : " ಬೃಹತ್ ರಕ್ತದಾನ ಶಿಬಿರ"

Update: 2016-04-07 22:59 IST


ಮಂಗಳೂರು : " ಬ್ಲಡ್ ಡೋನೋರ್ಸ್ ಮಂಗಳೂರು " ಮತ್ತು " ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು " ಇದರ ಜಂಟಿ ಸಹಭಾಗಿತ್ವದಲ್ಲಿ ಕೆ ಎಂ ಸಿ ಆಸ್ಪತ್ರೆ ಮಂಗಳೂರು ಇದರ ಸಹಕಾರದೊಂದಿಗೆ " ಬೃಹತ್ ರಕ್ತದಾನ ಶಿಬಿರ" ಹಾಗೂ ರಕ್ತದಾನಿಗಳಿಗೆ ಹಾಗೂ ರೋಗಿಗಳಿಗೆ ಸಮರ್ಪಕವಾದ ರಕ್ತದ ಪೂರೈಕೆಯ ಸಲುವಾಗಿ " ಬ್ಲಡ್ ಡೋನೋರ್ಸ್ ಮಂಗಳೂರು " ಇವರು ಆರಂಭಿಸಿರುವ ವೆಬ್ ಸೈಟ್ ಉದ್ಘಾಟನಾ ಸಮಾರಂಭ ಇಂದು ಸಹ್ಯಾದ್ರಿ ಕಾಲೇಜಿನ ಆಡಿಟೋರಿಯಂ ನಲ್ಲಿ ನಡೆಯಿತು 

ಶ್ರೀನಿವಾಸ ವೈಧ್ಯಕೀಯ ಕಾಲೇಜಿನ ಮುಖ್ಯಧಿಕಾರಿ ಹಾಗೂ ಖ್ಯಾತ ವೈದ್ಯರೂ ಆದ ಡಾ  ಅಣ್ಣಯ್ಯ ಕುಲಾಲ್ ಉಳ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ಹಾಗೂ " ಬ್ಲಡ್ ಡೋನೋರ್ಸ್ ಮಂಗಳೂರು  ಇವರ ವೆಬ್ ಸೈಟ್ " www.blooddonorsmangaluru.org" ಲೋಕಾರ್ಪಣೆ ಮಾಡಿದರು, ನಂತರ ಮಾತನಾಡಿದ ಡಾ  ಅಣ್ಣಯ್ಯ ಕುಲಾಲ್, ರಕ್ತದಾನದ ಬಗ್ಗೆ ಮತ್ತು ಅದರ ಶ್ರೇಷ್ಠತೆ ಬಗ್ಗೆ  ಸಲುವಾಗಿ  ಬ್ಲಡ್ ಡೋನೋರ್ಸ್ ಮಂಗಳೂರು ತಂಡವು ರೂಪಿಸಿರುವ ವೆಬ್ ಸೈಟ್ , ಶ್ಲಾಘನೀಯ  ಹಾಗೂ ಇಲ್ಲಿ ರಕ್ತದ ಬೇಡಿಕೆ ಸಂಧರ್ಭದಲ್ಲಿ  ಹಿಂದೂ ಮುಸ್ಲಿಂ ಜಾತಿ ನೋಡದೆ ಎಲ್ಲರೂ ಒಂದಾಗುತ್ತಾರೆ ಎಂದು ಹೇಳಿದರು, ನಂತರ ಮಾತನಾಡಿದ ಸಹ್ಯಾದ್ರಿ ಕಾಲೇಜಿನ ಪ್ರಾಶುಂಪಾಲ ರಾದ ಡಾ . ಉಮೇಶ್ ಎಂ ಭೂಷಿ, ಸಾಮಾಜಿಕ ಮಾಧ್ಯಮಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ  ಈ ಕಾಲದಲ್ಲಿ ರಕ್ತದಾನದಂತಹ ಶ್ರೇಷ್ಟ ಕಾರ್ಯವನ್ನು ಮಾಡುತ್ತಿರುವ " ಬ್ಲಡ್ ಡೋನೋರ್ಸ್ ಮಂಗಳೂರು ತಂಡವು ಬೇರೆ ಯುವಕರಿಗೆ ಮಾದರಿಯಾಗಿದೆ  ಎಂದು ಹೇಳಿದರು 

ಕಾರ್ಯಕ್ರಮದಲ್ಲಿ " ಬ್ಲಡ್ ಡೋನೋರ್ಸ್ ಮಂಗಳೂರು ' ತಂಡದ ವತಿಯಿಂದ ಹಾಗೂ ಸಹ್ಯಾದ್ರಿ ಕಾಲೇಜಿನ ವಿಧ್ಯಾರ್ಥಿಗಳು ಸೇರಿ ರಕ್ತದಾನದ  ಅರಿವು ಮೂಡಿಸುವ ಬಗ್ಗೆ ರಚಿಸಿರುವ ಕಿರು ಚಿತ್ರವನ್ನು ಬಿಡುಗಡೆಗೊಳಿಸಲಾಯಿತು, ಮತ್ತು " ಬ್ಲಡ್ ಡೋನೋರ್ಸ್ ಮಂಗಳೂರು  ತಂಡದ ಹಾಗೂ ಕಿರುಚಿತ್ರದಲ್ಲಿ ನಟಿಸಿರುವ ಭವಿತ್ ರಾಜ್, ಬಿಜೇಶ್ ಸಾಮಣಿ  , ಆಶಿಕ್  ಪಿ ಎಂ, ಪ್ರಿಯಾ ಶೆಟ್ಟಿ ಮತ್ತು ಶ್ರುತಿ ಶೆಟ್ಟಿ ಯವರನ್ನು  ಸನ್ಮಾನಿಸಲಾಯಿತು 

ವೇದಿಕೆಯಲ್ಲಿ " ಬ್ಲಡ್ ಡೋನೋರ್ಸ್ ಮಂಗಳೂರು  " ಸ್ಥಾಪಕಾಧ್ಯಕ್ಷರಾದ ಸಿದ್ದೀಕ್ ಉರ್ಣಿ  ಮಂಜೇಶ್ವರ , ಕೆ ಎಂ ಸಿ ಬ್ಲಡ್ ಬ್ಯಾಂಕ್ ಅಧಿಕಾರಿ ಡಾ ದೀಪಾ ಅಡಿಗ ಮತ್ತು ಸಹ್ಯಾದ್ರಿ ಕಾಲೇಜಿನ ಪ್ರಾಶುಂಪಾಲ ರಾದ ಡಾ . ಉಮೇಶ್ ಎಂ ಭೂಷಿ . ಸಹ್ಯಾದ್ರಿ ಕಾಲೇಜಿನ ಪ್ರದ್ಯಪಕರಾದ ಪ್ರೊ. ಜೆ ವಿ ಗೋಪಾಲ್ ಹಾಗೂ ಡಾ ವಿಶಾಲ್ ಸಮರ್ಥ, ಉಪಸ್ಥಿತರಿದ್ದರು, ಕಾರ್ಯಕ್ರಮದಲ್ಲಿ ಸುಮಾರು ೧೦೦ ಮಂದಿ ರಕ್ತದಾನ ಮಾಡಿದರು ವಿಧ್ಯಾರ್ಥಿನಿ ರೇಷ್ಮಾ  ಕಾರ್ಯಕ್ರಮ ನಿರೂಪಿಸಿದರು  ಜೆ ವಿ ಗೋರ್ಬಲ್,  ಧನ್ಯವಾದ ಸಮರ್ಪಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News