ಮಂಗಳೂರು : " ಬೃಹತ್ ರಕ್ತದಾನ ಶಿಬಿರ"
ಮಂಗಳೂರು : " ಬ್ಲಡ್ ಡೋನೋರ್ಸ್ ಮಂಗಳೂರು " ಮತ್ತು " ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು " ಇದರ ಜಂಟಿ ಸಹಭಾಗಿತ್ವದಲ್ಲಿ ಕೆ ಎಂ ಸಿ ಆಸ್ಪತ್ರೆ ಮಂಗಳೂರು ಇದರ ಸಹಕಾರದೊಂದಿಗೆ " ಬೃಹತ್ ರಕ್ತದಾನ ಶಿಬಿರ" ಹಾಗೂ ರಕ್ತದಾನಿಗಳಿಗೆ ಹಾಗೂ ರೋಗಿಗಳಿಗೆ ಸಮರ್ಪಕವಾದ ರಕ್ತದ ಪೂರೈಕೆಯ ಸಲುವಾಗಿ " ಬ್ಲಡ್ ಡೋನೋರ್ಸ್ ಮಂಗಳೂರು " ಇವರು ಆರಂಭಿಸಿರುವ ವೆಬ್ ಸೈಟ್ ಉದ್ಘಾಟನಾ ಸಮಾರಂಭ ಇಂದು ಸಹ್ಯಾದ್ರಿ ಕಾಲೇಜಿನ ಆಡಿಟೋರಿಯಂ ನಲ್ಲಿ ನಡೆಯಿತು
ಶ್ರೀನಿವಾಸ ವೈಧ್ಯಕೀಯ ಕಾಲೇಜಿನ ಮುಖ್ಯಧಿಕಾರಿ ಹಾಗೂ ಖ್ಯಾತ ವೈದ್ಯರೂ ಆದ ಡಾ ಅಣ್ಣಯ್ಯ ಕುಲಾಲ್ ಉಳ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ಹಾಗೂ " ಬ್ಲಡ್ ಡೋನೋರ್ಸ್ ಮಂಗಳೂರು ಇವರ ವೆಬ್ ಸೈಟ್ " www.blooddonorsmangaluru.org" ಲೋಕಾರ್ಪಣೆ ಮಾಡಿದರು, ನಂತರ ಮಾತನಾಡಿದ ಡಾ ಅಣ್ಣಯ್ಯ ಕುಲಾಲ್, ರಕ್ತದಾನದ ಬಗ್ಗೆ ಮತ್ತು ಅದರ ಶ್ರೇಷ್ಠತೆ ಬಗ್ಗೆ ಸಲುವಾಗಿ ಬ್ಲಡ್ ಡೋನೋರ್ಸ್ ಮಂಗಳೂರು ತಂಡವು ರೂಪಿಸಿರುವ ವೆಬ್ ಸೈಟ್ , ಶ್ಲಾಘನೀಯ ಹಾಗೂ ಇಲ್ಲಿ ರಕ್ತದ ಬೇಡಿಕೆ ಸಂಧರ್ಭದಲ್ಲಿ ಹಿಂದೂ ಮುಸ್ಲಿಂ ಜಾತಿ ನೋಡದೆ ಎಲ್ಲರೂ ಒಂದಾಗುತ್ತಾರೆ ಎಂದು ಹೇಳಿದರು, ನಂತರ ಮಾತನಾಡಿದ ಸಹ್ಯಾದ್ರಿ ಕಾಲೇಜಿನ ಪ್ರಾಶುಂಪಾಲ ರಾದ ಡಾ . ಉಮೇಶ್ ಎಂ ಭೂಷಿ, ಸಾಮಾಜಿಕ ಮಾಧ್ಯಮಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಈ ಕಾಲದಲ್ಲಿ ರಕ್ತದಾನದಂತಹ ಶ್ರೇಷ್ಟ ಕಾರ್ಯವನ್ನು ಮಾಡುತ್ತಿರುವ " ಬ್ಲಡ್ ಡೋನೋರ್ಸ್ ಮಂಗಳೂರು ತಂಡವು ಬೇರೆ ಯುವಕರಿಗೆ ಮಾದರಿಯಾಗಿದೆ ಎಂದು ಹೇಳಿದರು
ಕಾರ್ಯಕ್ರಮದಲ್ಲಿ " ಬ್ಲಡ್ ಡೋನೋರ್ಸ್ ಮಂಗಳೂರು ' ತಂಡದ ವತಿಯಿಂದ ಹಾಗೂ ಸಹ್ಯಾದ್ರಿ ಕಾಲೇಜಿನ ವಿಧ್ಯಾರ್ಥಿಗಳು ಸೇರಿ ರಕ್ತದಾನದ ಅರಿವು ಮೂಡಿಸುವ ಬಗ್ಗೆ ರಚಿಸಿರುವ ಕಿರು ಚಿತ್ರವನ್ನು ಬಿಡುಗಡೆಗೊಳಿಸಲಾಯಿತು, ಮತ್ತು " ಬ್ಲಡ್ ಡೋನೋರ್ಸ್ ಮಂಗಳೂರು ತಂಡದ ಹಾಗೂ ಕಿರುಚಿತ್ರದಲ್ಲಿ ನಟಿಸಿರುವ ಭವಿತ್ ರಾಜ್, ಬಿಜೇಶ್ ಸಾಮಣಿ , ಆಶಿಕ್ ಪಿ ಎಂ, ಪ್ರಿಯಾ ಶೆಟ್ಟಿ ಮತ್ತು ಶ್ರುತಿ ಶೆಟ್ಟಿ ಯವರನ್ನು ಸನ್ಮಾನಿಸಲಾಯಿತು
ವೇದಿಕೆಯಲ್ಲಿ " ಬ್ಲಡ್ ಡೋನೋರ್ಸ್ ಮಂಗಳೂರು " ಸ್ಥಾಪಕಾಧ್ಯಕ್ಷರಾದ ಸಿದ್ದೀಕ್ ಉರ್ಣಿ ಮಂಜೇಶ್ವರ , ಕೆ ಎಂ ಸಿ ಬ್ಲಡ್ ಬ್ಯಾಂಕ್ ಅಧಿಕಾರಿ ಡಾ ದೀಪಾ ಅಡಿಗ ಮತ್ತು ಸಹ್ಯಾದ್ರಿ ಕಾಲೇಜಿನ ಪ್ರಾಶುಂಪಾಲ ರಾದ ಡಾ . ಉಮೇಶ್ ಎಂ ಭೂಷಿ . ಸಹ್ಯಾದ್ರಿ ಕಾಲೇಜಿನ ಪ್ರದ್ಯಪಕರಾದ ಪ್ರೊ. ಜೆ ವಿ ಗೋಪಾಲ್ ಹಾಗೂ ಡಾ ವಿಶಾಲ್ ಸಮರ್ಥ, ಉಪಸ್ಥಿತರಿದ್ದರು, ಕಾರ್ಯಕ್ರಮದಲ್ಲಿ ಸುಮಾರು ೧೦೦ ಮಂದಿ ರಕ್ತದಾನ ಮಾಡಿದರು ವಿಧ್ಯಾರ್ಥಿನಿ ರೇಷ್ಮಾ ಕಾರ್ಯಕ್ರಮ ನಿರೂಪಿಸಿದರು ಜೆ ವಿ ಗೋರ್ಬಲ್, ಧನ್ಯವಾದ ಸಮರ್ಪಿಸಿದರು