×
Ad

ಕಾರ್ಕಳ: ಮನೆಗೆ ನುಗ್ಗಿ ಚಿನ್ನಾಭರಣ ದೋಚಿ ಕಳ್ಳರು ಪರಾರಿ

Update: 2016-04-09 20:25 IST

ಕಾರ್ಕಳ: ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಖಾತ್ರಿಪಡಿಸಿದ ಕಳ್ಳರು ರಾತ್ರಿವೇಳೆ ಮನೆಯ ಮುಂಬಾಗಿಲಿನ ಬೀಗ ಮುರಿದು ಕಪಾಟಿನಲ್ಲಿದ್ದ ಚಿನ್ನಾಭರಣ ಹಾಗೂ ದೇವರ ಬೆಳ್ಳಿಯ ಪೂಜಾ ಸಾಮಾಗ್ರಿಗಳನ್ನು ಕಳವುಗೈದ ಘಟನೆ ಶುಕ್ರವಾರ ತಡರಾತ್ರಿ ಅನಂತಶಯನದ ನಾಗರಬಾವಿ ಎಂಬಲ್ಲಿ ನಡೆದಿದೆ.ಸಬಾ ಗ್ರಾಮದ ಅನಂತಶಯನ ಬಳಿಯ ಸುಶಾಂತ್ ನಾಯಕ್ ಎಂಬವರ ಮನೆಗೆ ನುಗ್ಗಿರುವ ಕಳ್ಳರು ಚಿನ್ನದ ಸರ,ಬಳೆ,ನಾಣ್ಯಗಳ ಸಹಿತ ಬೆಳ್ಳಿಯ ದೀಪ ಸೇರಿದಂತೆ ಒಟ್ಟು 90 ಸಾವಿರ ರೂ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ಸುಶಾಂತ್ ನಾಯಕ್ ಮನೆಮಂದಿ ಶುಕ್ರವಾರ ಕಾರ್ಯಕ್ರಮವೊಂದಕ್ಕೆ ಮನೆಗೆ ಬೀಗ ಹಾಕಿ ಮಂಗಳೂರಿಗೆ ಹೋಗಿದ್ದು ಬಳಿಕ ಶನಿವಾರ ಮಧ್ಯಾಹ್ನ ಮನೆಗೆ ಬಂದಾಗ ಕಳ್ಳತನದ ಕೃತ್ಯ ಬೆಳಕಿಗೆ ಬಂದಿದೆ.

ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News