ಪ್ರತ್ಯೇಕ ಪ್ರಕರಣ: ಮೂವರ ಆತ್ಮಹತ್ಯೆ

Update: 2016-04-09 18:36 GMT

ಕುಂದಾಪುರ, ಎ.9: ಕೋಟೇಶ್ವರ ಗ್ರಾಮದ ಮೂಡುಗೋಪಾಡಿ ಎಂಬಲ್ಲಿ ಚಿಕ್ಕಮಗಳೂರಿನ ನಂದೀಶ ಎಂಬವರ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮುಹಮ್ಮದ್ ರಫೀಕ್ ಎಂಬವರು ಜಿಗುಪ್ಸೆಗೊಂಡು ಎ.8ರಂದು ಮಧ್ಯಾಹ್ನ ವೇಳೆ ತೋಟದಲ್ಲಿದ್ದ ಮನೆಯ ಛಾವಣಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಕಳ: ವೈಯಕ್ತಿಕ ಕಾರಣದಿಂದ ಮನನೊಂದ ಮಾಳ ಗ್ರಾಮದ ಧಗರ ಗುಡ್ಡೆ ನಿವಾಸಿ ಬಾಬು(45) ಎಂಬವರು ಎ.8ರಂದು ಬೆಳಗ್ಗೆ ಮನೆಯ ಸಮೀಪದ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಪು: ಉದ್ಯಾವರ ಪಿತ್ರೋಡಿಯ ಪ್ರವೀಣ್ ಅಮ್ಮನ್ನ(30) ಎಂಬವರು ಎ.7ರ ರಾತ್ರಿಯಿಂದ ಎ.9ರ ಬೆಳಗಿನ ಅವಧಿಯಲ್ಲಿ ಪಿತ್ರೋಡಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News