×
Ad

ಪುತ್ತೂರು : ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿಗೆ ತಂತ್ರಜ್ಞಾನದಲ್ಲಿ ಪ್ರೋತ್ಸಾಹಕ ಬಹುಮಾನ

Update: 2016-04-11 19:36 IST
ವಿಜ್ಞಾನ ಮತ್ತು ತಾಂತ್ರಿಕ ಪ್ರದರ್ಶನ ಅನ್ವೇಷಣಾ 2016 ರಲ್ಲಿ ಪ್ರೋತ್ಸಾಹಕ ಬಹುಮಾನ ಪಡೆದ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು.

ಪುತ್ತೂರು : ಬೆಂಗಳೂರಿನ ಅಗಸ್ತ್ಯ ಇಂಟರ್ನೇಶನಲ್ ಫೌಂಡೇಶನ್ ಮತ್ತು ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ ಎಂಡ್ ಟೆಕ್ನಾಲಜಿ ಮ್ಯೂಸಿಯಂನ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ನಡೆದ ‘ವಿಜ್ಞಾನ ಮತ್ತು ತಾಂತ್ರಿಕ ಪ್ರದರ್ಶನ ಅನ್ವೇಷಣಾ-2016’ ರಲ್ಲಿ ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಮಹೇಶ್ ಎ, ತೀರ್ಥಪ್ರಸಾದ್ ಎಚ್, ಪ್ರದೀಪ್ ಕುಮಾರ್ ಎಂ ಬಿ ಮತ್ತು ಸಚಿನ್ ಎ ಅವರು ಸಿದ್ದಪಡಿಸಿದ ಪರ್ಫಾರ್ಮೆನ್ಸ್ ಸ್ಟಡಿ ಆನ್ ಫ್ರೆಸ್ನೆಲ್ ಲೆನ್ಸ್ ಬೇಸ್ಡ್ ವಾಟರ್ ಡಿಸ್ಟಿಲ್ಲೇಶನ್ ಸಿಸ್ಟಮ್ ಎನ್ನುವ ತಂತ್ರಜ್ಞಾನವು ಪ್ರೋತ್ಸಾಹಕ ಬಹುಮಾನವನ್ನು ಪಡೆದುಕೊಂಡಿದೆ. ಒಟ್ಟು ಪ್ರದರ್ಶಿಸಲ್ಪಟ್ಟ 45 ಪ್ರಾಜೆಕ್ಟ್‌ಗಳಲ್ಲಿ ಇದು 6 ನೇ ಸ್ಥಾನವನ್ನು ಗಳಿಸಿಕೊಂಡಿದೆ. ಕೊಂಬೆಟ್ಟಿನ ಸರ್ಕಾರಿ ಪ್ರೌಢಶಾಲೆಯ 9 ನೇ ತರಗತಿಯ ವಿದ್ಯಾರ್ಥಿಗಳಾದ ಪ್ರತೀಕ್‌ರಾಜ್ ಮತ್ತು ಸನತ್‌ರಾಘವ್ ವಿವರಣಾಕಾರರಾಗಿ ಭಾಗವಹಿಸಿದ್ದರು. ಉಪನ್ಯಾಸಕ ಪ್ರೊ. ಸತೀಶ್ ಕುಮಾರ್ ಕೆ ಅವರ ಮಾರ್ಗದರ್ಶನ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News