ವಿಟ್ಲ : ಸ್ವಾರ್ಥ ರಹಿತ ನಿಷ್ಕಳಂಕ ಉಲಮಾ ಸಾದಾತ್‌ಗಳು ಕಟ್ಟಿ ಬೆಳೆಸಿದ ಆಧ್ಯಾತ್ಮಿಕ ಸಂಘಟನೆ ಸಮಸ್ತ

Update: 2016-04-12 16:12 GMT

ವಿಟ್ಲ : ಸ್ವಾರ್ಥ ರಹಿತ ನಿಷ್ಕಳಂಕ ಉಲಮಾ ಸಾದಾತ್‌ಗಳು ಕಟ್ಟಿ ಬೆಳೆಸಿದ ಆಧ್ಯಾತ್ಮಿಕ ಸಂಘಟನೆಯಾಗಿದೆ ಸಮಸ್ತ ಎಂದು ಖ್ಯಾತ ಭಾಷಣಗಾರ ಅಬ್ದುಲ್ ಅಝೀರ್ ಅಶ್ರಫಿ ಪಾಣತ್ತೂರು ಹೇಳಿದರು.

        ಕಬಕದ ಸಂಶುಲ್ ಉಲಮಾ ಕ್ರಿಯಾ ಸಮಿತಿ ಆಶ್ರಯದಲ್ಲಿ ಸೋಮವಾರ ರಾತ್ರಿ ಕಬಕ ಜಂಕ್ಷನ್‌ನ ಮರ್‌ಹೂಂ ಚೆರುಶ್ಶೇರಿ ಉಸ್ತಾದ್ ವೇದಿಕೆಯಲ್ಲಿ ನಡೆದ ಅಗಲಿದ ಸಮಸ್ತ ನೇತಾರರ ಅನುಸ್ಮರಣಾ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಮಸ್ತದ ಕೊಡುಗೆ ಅನನ್ಯವಾಗಿದೆ ಎಂದರು.

        ಸಯ್ಯಿದ್ ಯಹ್ಯಾ ತಂಙಳ್ ಪೋಳ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಪಯ್ಯನ್ನೂರು ಅರ್ಹರಿಯಾ ಅರಬಿಕ್ ಕಾಲೇಜು ಪ್ರೊಫೆಸರ್ ಶೇಖ್ ಮುಹಮ್ಮದ್ ಇರ್ಫಾನಿ ಉದ್ಘಾಟಿಸಿ, ಜುನೈದ್ ಜಿಫ್ರಿ ಮುತ್ತುಕೋಯ ತಂಙಳ್ ಆತೂರು ದುವಾ ನೆರವೇರಿಸಿದರು.

        ಎ.ಪಿ.ಎಸ್. ಮುಹಮ್ಮದ್ ತಂಙಳ್ ಕಬಕ, ಕಬಕ ಮುದರ್ರಿಸ್ ಮುಹಮ್ಮದ್ ಮದನಿ, ವಿಟ್ಲ ಮುದರ್ರಿಸ್ ಹಸನ್ ಹರ್ಷದಿ, ಇಬ್ರಾಹಿಂ ಮುಸ್ಲಿಯಾರ್ ಕೊಡಿಪ್ಪಾಡಿ, ಚೇಳಾರಿ ಸಮಸ್ತ ಮತ ವಿದ್ಯಾಭ್ಯಾಸ ಬೋರ್ಡ್ ಸದಸ್ಯರುಗಳಾದ ಹಾಜಿ ಕೆ.ಎಸ್. ಇಸ್ಮಾಯಿಲ್, ಹಾಜಿ ಜಿ. ಅಬೂಬಕ್ಕರ್ ಗೋಳ್ತಮಜಲು, ದ.ಕ. ಜಿಲ್ಲಾ ಸಂಯುಕ್ತ ಜಮಾಅತ್ ಕಾರ್ಯದರ್ಶಿ ಗೋಲ್ಡನ್ ಹಮೀದ್ ಹಾಜಿ ಕಲ್ಲಡ್ಕ, ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಪ್ಪಿನಂಗಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

                ಬೆಳ್ಳಾರೆ ಎಸ್‌ವೈಎಸ್ ಅಧ್ಯಕ್ಷ ಕೆ. ಮಮ್ಮಾಲಿ ಹಾಜಿ, ಹಸೈನಾರ್ ಹಾಜಿ ಬೆಳ್ಳಾರೆ, ಉಮ್ಮರ್ ಹಾಜಿ ಕೆಜಿಎನ್ ಘಟಕ, ಇಬ್ರಾಹಿಂ ಮಧುರಾ ಕಬಕ, ರಫೀಕ್ ಅಹ್ಮದ್ ಬ್ರೈಟ್ ಪೋಳ್ಯ, ಉಮ್ಮರ್ ಕರಾವಳಿ ಕಬಕ, ಕೆ. ಶಾಬ ಕಬಕ, ಅಬ್ದುಲ್ಲ ಡೆಂಬಲೆ, ಮುಹಮ್ಮದ್ ಕಬಕಕಾರ್ಸ್‌, ಕೆ.ಎಂ. ಮುಹಮ್ಮದ್ ಹಾಜಿ ಬೆಳ್ಳಾರೆ, ಬಶೀರ್ ಬಿ.ಎ. ಬೆಳ್ಳಾರೆ, ನುಹ್ಮಾನ್ ಕಬಕ, ಕೆ.ಎಸ್. ಅಬ್ಬಾಸ್ ಕಬಕ, ವಿ.ಎಸ್. ಇಬ್ರಾಹಿಂ ಒಕ್ಕೆತ್ತೂರು, ಉಬೈದ್ ವಿಟ್ಲ, ಹಮೀದ್ ಕುಕ್ಕರಬೆಟ್ಟು, ಝಮೀರ್ ಕಬಕ, ಅಶ್ರಫ್ ಕೆದುವಡ್ಕ, ಅಬೂಬಕ್ಕರ್ ಹಾಜಿ ಮಂಗಳ, ಆದಂ ಎಂ.ಎಂ.ಎಸ್. ಮಿತ್ತೂರು, ಖಾದರ್ ಎನ್‌ಎಂಎಸ್, ಮುಬೀರ್ ಚಾಂದ್ ಕಬಕ ಮೊದಲಾದವರು ಉಪಸ್ಥಿತರಿದ್ದರು.ಕಬಕ ಸಂಶುಲ್ ಉಲಮಾ ಕ್ರಿಯಾ ಸಮಿತಿ ಅಧ್ಯಕ್ಷ ಅಬ್ದುಲ್ ಅಝೀರ್ ಕೊಡಿಪ್ಪಾಡಿ ಸ್ವಾಗತಿಸಿ, ಚೆಯರ್‌ಮೆನ್ ಕೆ.ಎಸ್. ಆಸಿಫ್ ವಂದಿಸಿದರು. ಕೆ.ಎಂ.ಎ. ಕೊಡುಂಗಾಯಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News