×
Ad

ಕಾಸರಗೋಡು : ಪ್ರಮುಖ ಧಾರ್ಮಿಕ ವಿಧ್ವಾಂಸ ಸಿ.ಪಿ. ಕುನ್ಚಬ್ದುಲ್ಲ ಮುಸ್ಲಿಯಾರ್ ನಿಧನ

Update: 2016-04-13 16:56 IST

ಕಾಸರಗೋಡು : ಪ್ರಮುಖ ಧಾರ್ಮಿಕ ವಿಧ್ವಾಂಸ ಸಿ.ಪಿ. ಕುನ್ಚಬ್ದುಲ್ಲ  ಮುಸ್ಲಿಯಾರ್ (85) ನಿಧನರಾದರು   ಕಾನ್ಚಾನ್ಗಾಡ್ ಹಳೆ ಕದಪ್ಪುರ  ಮಹಾಲಾ ಅಧ್ಯಕ್ಷ ಹಾಗೂ  ವಿವಿಧ ಶೈಕ್ಷಣಿಕ ಸಂಸ್ಥೆಗಳ  ಸಲಹೆಗಾರರಾಗಿದ್ದರು.
ಕೇರಳ - ಕರ್ನಾಟಕದ  ನೂರಾರು  ಆಧ್ಯಾತ್ಮಿಕ ಮಜ್ಲೀಸ್ ಗಳ  ನೇತ್ರತ್ವ ನೀಡುತ್ತಿದ್ದರು.
ಊರಿನಲ್ಲಿ    ಪ್ರಾಥಮಿಕ ಶಿಕ್ಷಣ ಪಡೆದು ಬಳಿಕ  ಮಂಜನಾಡಿ  ಉಸ್ತಾದ್   ರವರ  ದರ್ಸ್ ನಲ್ಲಿ  ವರ್ಷಗಳ ಕಾಲ ಆಧ್ಯಾತ್ಮಿಕ   ಶಿಕ್ಷಣ ಪಡೆದರು .
19 ವರ್ಷಗಳ  ಕಾಲ  ಕುಂಬಳೆ ಶಿರಿಯ ದಲ್ಲಿ  ಖತೀಬ್ ಆಗಿದ್ದರು. ವರ್ಷಗಳಿಂದ  ಕಾನ್ಚಾ೦ಗಾಡ್ ಹಳೆ ಕಡಪ್ಪುರದಲ್ಲಿ  ಜುಮಾಅ  ಖುತ್ ಬುಕ್ ಗೆ  ನೇತ್ರತ್ವ ನೀಡುತ್ತಿದ್ದರು.
ಪತ್ನಿ ಯರು : ದಿ.  ಜೈನಬಾ,  ಆಯಿಷಾ  ಹಾಗೂ 13 ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ .
ಮುಸ್ಲಿಯಾರ್ ರವರ ನಿಧನಕ್ಕೆ  ಸಮಸ್ತ ಪ್ರಧಾನ ಕಾರ್ಯದರ್ಶಿ  ಕಾಂತಪುರ ಎ . ಪಿ ಅಬೂಬಕ್ಕರ್ ಮುಸ್ಲಿಯಾರ್ , ಸಮಸ್ತ  ಉಪಾಧ್ಯಕ್ಷ  ಎಂ .  ಅಲಿಕುನ್ಚಿ ಮುಸ್ಲಿಯಾರ್ ,  ಸಆದಿಯ  ಅಧ್ಯಕ್ಷ  ಸಯ್ಯಿದ್  ಕೆ . ಎಸ್  ಆಟಕೋಯ  ತಂಗಲ್  ಕುಂಬೋಲ್,  ಮುಹಿಮ್ಮತ್  ಪ್ರಧಾನ ಕಾರ್ಯದರ್ಶಿ  ಬಿ . ಎಸ್ ಅಬ್ದುಲ್ಲ ಕುನ್ಚಿ  ಪೈಜಿ,  ಕೇರಳ ಮುಸ್ಲಿಂ  ಜಮಾಅತ್  ಅಧ್ಯಕ್ಷ  ಸಯ್ಯಿದ್  ಮುಹಮ್ಮದ್ ಇಬ್ರಾಹಿಮ್ ಪೂಕುನ್ಚಿ ತಂಗಲ್  ಮೊದಲಾದವರು  ಸಂತಾಪವ್ಯಕ್ತಪಡಿಸಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News