ಹಿರೋ ಸೈಕಲ್ಸ್‌ನ ಸ್ಥಾಪಕ ಸತ್ಯಾನಂದ ಮುಂಜಾಲ್ ಇನ್ನಿಲ್ಲ

Update: 2016-04-14 14:15 GMT

ಲುಧಿಯಾನಾ,ಎ.14: ಹಿರೋ ಸೈಕಲ್ಸ್‌ನ ಸ್ಥಾಪಕ ಸತ್ಯಾನಂದ ಮುಂಜಾಲ್(99) ಅವರು ಗುರುವಾರ ಇಲ್ಲಿಯ ಮಾಡೆಲ್ ಟೌನ್‌ನ ತನ್ನ ನಿವಾಸದಲ್ಲಿ ನಿಧನರಾದರು.

‘ಮಹಾತ್ಮಾ’ ಎಂದು ಜನಪ್ರಿಯರಾಗಿದ್ದ ಅವರು ಉದ್ಯಮ ಮತ್ತು ಸಾಮಾಜಿಕ ವಲಯಗಳಲ್ಲಿ ಅತ್ಯಂತ ಗೌರವಾನ್ವಿತ ವ್ಯಕ್ತಿಯಾಗಿದ್ದರು.

ಅವರು ಐವರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಆರ್ಯ ಸಮಾಜದ ಕಟ್ಟಾ ಅನುಯಾಯಿಯಾಗಿದ್ದ ಅವರು ಮುಂಜಾಲ್ ಸೋದರರ ಪೈಕಿ ಹಿರಿಯರಾಗಿದ್ದು,ಅವರು ಸ್ಥಾಪಿಸಿದ್ದ ಹಿರೋ ಗ್ರೂಪ್ ಇಂದು ಭಾರತದ ಬೃಹತ್ ಉದ್ಯಮ ಸಮೂಹಗಳಲ್ಲೊಂದಾಗಿದೆ.

ಪಂಜಾಬ್ ಮುಖ್ಯಮಂತ್ರಿ ಪ್ರಕಾಶ ಸಿಂಗ್ ಬಾದಲ್,ಉಪ ಮುಖ್ಯಮಂತ್ರಿ ಸುಖಬೀರ್ ಸಿಂಗ್ ಬಾದಲ್ ಮತ್ತು ಕಂದಾಯ ಸಚಿವ ಬಿಕ್ರಂ ಸಿಂಗ್ ಮಜಿಥಿಯಾ ಅವರು ಮುಂಜಾಲ್ ನಿಧನಕ್ಕೆ ಸಂತಾಪಗಳನ್ನು ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News