ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ರಣಬಿಸಿಲಿಗೆ ಶಾಲಾ ಬಾಲಕಿ ಬಲಿ
Update: 2016-04-20 06:58 GMT
ಬೀಡ್ (ಮಹಾರಾಷ್ಟ್ರ), ಎ.20:ನೀರು ತರಲು ತೆರಳಿದ್ದ ಶಾಲಾ ಬಾಲಕಿಯೊಬ್ಬಳು ಬಿಸಿಲಿನ ಬೇಗೆಯನ್ನು ತಾಳಲಾರದೆ ಕುಸಿದು ಬಿದ್ದು ಮೃತಪಟ್ಟ ಘಟನೆ ಬರಗಾಲದಿಂದ ತತ್ತರಿಸಿರುವ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಸಬಲ್ಖೇಡ್ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಹನ್ನೆರಡರ ಹರೆಯದ ಯೋಗಿತಾ ಅಶೋಕ್ ದೇಸಾಯಿ ಎಂಬಾಕೆಯು ಮನೆಯಿಂದ ಅರ್ಧ ಕಿ.ಲೋ ದೂರದಲ್ಲಿರುವ ಶಾಲೆಯ ಪಕ್ಕದ ಹ್ಯಾಂಡ್ ಪಂಪ್ನಿಂದ ನೀರು ತರಲು ತೆರಳಿದ್ದಳು. ದಾರಿಯಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾಳೆ.
ನೀರು ತರಳು ತೆರಳಿದ್ದ ಬಾಲಕಿ ಮನೆಗೆ ಮರಳಿ ಬಾರದೆ ಇದ್ದಾಗೆ ಮನೆ ಮಂದಿ ಆಕೆಗಾಗಿ ಹುಡುಕಾಟ ನಡೆಸಿದರು.ಶಾಲೆಯ ಪಕ್ಕದಲ್ಲಿ ಪ್ರಜ್ಞಾಹೀನವಾಗಿ ಕುಸಿದು ಬಿದ್ದ ಸ್ಥಿತಿಯಲ್ಲಿ ಬಾಲಕಿ ಪತ್ತೆಯಾದಳು.ಬಳಿಕ ಆಕೆಯನ್ನು ಆಸ್ಪತ್ರೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ ಎಂದು ಬಾಲಕಿಯ ಚಿಕ್ಕಪ್ಪ ಈಶ್ವರ್ ತಿಳಿಸಿದ್ದಾರೆ.