ನನ್ನ ಕಾಲನ್ನೂ ಕತ್ತರಿಸಿ,ಶಕ್ತಿಮಾನ್ ಸಾವಿಗೆ ಕಾರಣನಾದ ಬಿಜೆಪಿ ಶಾಸಕ ಹೇಳಿಕೆ

Update: 2016-04-21 11:43 GMT

ಡೆಹ್ರಾಡೂನ್, ಎಪ್ರಿಲ್ 21: ತನ್ನ ತಪ್ಪಿನಿಂದ ಶಕ್ತಿಮಾನ್ ಕುದುರೆಯ ಸಾವು ಸಂಭವಿಸಿಲ್ಲ ಒಂದು ವೇಳೆ ತಾನು ತಪ್ಪಿಸ್ಥನೆಂದು ಕಂಡು ಬಂದರೆ ತನ್ನ ಕಾಲನ್ನು ಕತ್ತರಿಸಿ ಎಂದು ಬಿಜೆಪಿ ಶಾಸಕ ಗಣೇಶ್ ಜೋಶಿ ಹೇಳಿರುವುದಾಗಿ ವರದಿಯಾಗಿದೆ. ಬಿಜೆಪಿಯ ಪ್ರತಿಭಟನೆಯೊಂದರ ಸಮಯದಲ್ಲಿ ಉತ್ತರಾಖಂಡ ಪೊಲೀಸ್ ಕುದುರೆ ಶಕ್ತಿಮಾನ್ ಕಾಲಿಗೆ ಗಣೇಶ್ ಜೋಶಿ ಹೊಡೆದದ್ದರಿಂದ ತುಂಡಾಗಿತ್ತು.ಒಂದು ತಿಂಗಳ ನರಳಾಟದ ಬಳಿಕ ಕುದುರೆ ಬುಧವಾರ ತೀರಿಕೊಂಡಿತ್ತು. ಇದೇ ಪ್ರಕರಣದಲ್ಲಿ ಜೋಶಿಯನ್ನು ಜೈಲಿಗೆ ಕಳುಹಿಸಲಾಗಿತ್ತು. ಇದೀಗ ಅವರು ಜಾಮೀನು ಮೂಲಕ ಹೊರಗೆ ಬಂದಿದ್ದಾರೆ.

ಜೋಶಿವಿರುದ್ಧ ಜಾನುವಾರುಗಳ ಮೇಲಿನ ಕ್ರೌರ್ಯ ವಿರೋಧಿ ಅಧಿನಿಯಮದ ಪ್ರಕಾರ ಮೊಕದ್ದಮೆ ದಾಖಲಿಸಲಾಗಿದೆ. ಆದರೆ ಜೋಶಿ ವಿಧಾನಸಭೆಯ ಹೊರಗೆ ಪ್ರತಿಭಟನಾಕಾರರನ್ನು ತಡೆಯಲು ಇರಿಸಿದ್ದ ಬ್ಯಾರಿಕೇಡ್ ತಾಗಿ ಶಕ್ತಿಮಾನ್ ಕುದುರೆಯ ಕಾಲಿಗೆ ಏಟಾಗಿತ್ತು ಎಂದಿದ್ದು ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ. ಅಂದಿದ್ದ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಈ ಬಿಜೆಪಿ ಶಾಸಕನ ವಿರುದ್ಧ ಕೇಸು ದಾಖಲಿಸಲಾಗಿತ್ತು. ವಿಪಕ್ಷ ಬಿಜೆಪಿ ಮೊಕದ್ದಮೆ ಹಿಂಪಡೆಯಲು ಒತ್ತಾಯಿಸಿದ್ದರು ಮುಖ್ಯಮಂತ್ರಿ ಹರೀಶ್ ರಾವತ್ ಪೊಲೀಸರ ಕೆಲಸದಲ್ಲಿ ಹಸ್ತಕ್ಷೇಪ ನಡೆಸುವುದಿಲ್ಲ ಎಂದು ಬಿಜೆಪಿ ಬೇಡಿಕೆಯನ್ನು ನಿರಾಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News