×
Ad

ಹೊಳೆಯಲ್ಲಿ ಸ್ನಾನಕ್ಕಿಳಿದ ಸಹೋದರಿಯರಿಬ್ಬರು ನೀರಿನಲ್ಲಿ ಮುಳುಗಿ ಮೃತ್ಯು

Update: 2016-04-21 22:19 IST

ಕಾಸರಗೋಡು : ಹೊಳೆಯಲ್ಲಿ ಸ್ನಾನಕ್ಕಿಳಿದ  ಸಹೋದರಿಯರಿಬ್ಬರು  ನೀರಿನಲ್ಲಿ ಮುಳುಗಿ ಮ್ರತಪಟ್ಟ ದಾರುಣ ಘಟನೆ  ಗುರುವಾರ ಸಂಜೆ  ಚಿತ್ತಾರಿಕಾಲ್ ನಲ್ಲಿ ನಡೆದಿದೆ. ಮ್ರತಪಟ್ಟವರನ್ನು   ಈಸ್ಟ್ ಎಳೇರಿಯ   ರಾಜೀವ್ - ಶಿಜಾ ದಂಪತಿ ಮಕ್ಕಳಾದ  ರಾಜಾಲಕ್ಷ್ಮಿ ರಾಜೀವ್ (12) ಮತ್ತು ಜಯಶ್ರೀ  ರಾಜೀವ್ (9) ಎಂದು ಗುರುತಿಸಲಾಗಿದೆ. ಗುರುವಾರ ಸಂಜೆ   ಮನೆ ಸಮೀಪದ  ತೇಜಸ್ವಿನಿ  ಹೊಳೆಗೆ ಸ್ನಾನ ಕ್ಕಿಳಿದ  ಸಂದರ್ಭದಲ್ಲಿ  ಘಟನೆ ನಡೆದಿದೆ.

ಅಜ್ಜನೊಂದಿಗೆ ಇಬ್ಬರು ಹೊಳೆ ನದಿಗೆ ಬಂದಿದ್ದರು. ನೀರಿಗಿಳಿದ ಸಂದರ್ಭದಲ್ಲಿ   ಜಯಶ್ರೀ ನೀರಿನಲ್ಲಿ ಮುಳುಗಿದ್ದು , ಈಕೆ ಯನ್ನು ರಕ್ಷಿಸಲು  ರಾಜಾಲಕ್ಷ್ಮಿ  ಹೊಳೆಗೆ ಹಾರಿದ್ದು ಇಬ್ಬರು  ನೀರಿನಲ್ಲಿ ಮುಳುಗಿದ್ದರು . ಬೊಬ್ಬೆ ಕೇಳಿ ಸ್ಥಳೀಯರು ದಾವಿಸಿ ಬಂದು   ಇಬ್ಬರನ್ನು ಮೇಲಕ್ಕೆತ್ತಿ ಸಮೀಪದ ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲಾಗಲಿಲ್ಲ. 
ಚಿತ್ತಾರಿಕಾಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ .
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News