ಡಿಕೆಎಸ್ಸಿ ಯುಎಇ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾಗಿ ಹುಸೈನ್ ಹಾಜಿ ಕಿನ್ಯ
ದುಬೈ, ಎ.21 ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ಡಿ.ಕೆ.ಎಸ್.ಸಿ.) ಯು.ಎ.ಇ. ರಾಷ್ಟ್ರೀಯ ಸಮಿತಿಯ ಮಹಾಸಭೆಯು ದುಬೈ ರಾಫಿ ಹೋಟೆಲ್ನ ಆಡಿಟೋರಿಯಂನಲ್ಲಿ ಇತ್ತೀಚೆಗೆ ಜರಗಿತು.
ಡಿಕೆಎಸ್ಸಿ ಸೆಂಟ್ರಲ್ ಕಮಿಟಿ ಹಾಗೂ ಮೂಳೂರಿನ ಮರ್ಕಝ್ ತಅ್ಲೀಮುಲ್ ಇಹ್ಸಾನ್ನ ಅಧ್ಯಕ್ಷ ಶೈಖುನಾ ಸೈಯದ್ ಕೆ.ಎಸ್. ಆಟಕೋಯ ತಂಙಳ್ ಕುಂಬೋಳ್ ದುಆಗೈದರು. ಸೆಂಟ್ರಲ್ ಕಮಿಟಿಯ ಸಂಚಾಲಕ ಇಸ್ಮಾಯೀಲ್ ಹಾಜಿ ಕಿನ್ಯ ಸಭೆಯನ್ನು ಉದ್ಘಾಟಿಸಿದರು. ಹಾಜಿ ಎಂ.ಕೆ.ಬ್ಯಾರಿ ಕಕ್ಕಿಂಜೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಸೆಂಟ್ರಲ್ ಕಮಿಟಿ ಅಧೀನದಲ್ಲಿರುವ ರಾಷ್ಟ್ರೀಯ ಹಾಗೂ ವಲಯ ಸಮಿತಿಗಳಲ್ಲಿ 2014-15ರಲ್ಲಿ ದ್ವಿತೀಯ ಸ್ಥಾನಕ್ಕೆ ಪಾತ್ರವಾದ ಯುಎಇ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಹಾಜಿ ಎಂ.ಕೆ.ಬ್ಯಾರಿ ಕಕ್ಕಿಂಜೆಗೆ ಸೈಯದ್ ಕೆ.ಎಸ್.ಆಟಕೋಯ ತಂಙಳ್ ಪ್ರಶಸ್ತಿ ಫಲಕ ನೀಡಿ ಗೌರವಿಸಿದರು. ಹಾತಿಂ ಕೂಳೂರು, ಇಸ್ಮಾಯೀಲ್ ಹಾಜಿ ಕಿನ್ಯ, ಶೇಕ್ ಬಳ್ಕುಂಜೆ, ಅಬ್ದುಲ್ ಅಝೀಝ್ ಮೂಳೂರ್ರನ್ನು ಈ ಸಂದರ್ಭ ಶಾಲು ಹೊದಿಸಿ ಸನ್ಮಾನಿಸಲಾಯಿತು. ಜೊತೆ ಕಾರ್ಯದರ್ಶಿ ಎಸ್. ಯೂಸುಫ್ ಅರ್ಲಪದವು ವರದಿ ವಾಚಿಸಿದರು. ಲೆಕ್ಕಪರಿಶೋಧಕ ಅಬ್ದುಲ್ಲ ಪೆರುವಾಯಿ ಲೆಕ್ಕಪತ್ರ ವಾಚಿಸಿದರು. ಕೋಶಾಧಿಕಾರಿ ಹುಸೈನ್ ಹಾಜಿ ಕಿನ್ಯ ಮಂಡಿಸಿದರು.
ನೂತನ ಸಾಲಿನ ಗೌರವಾಧ್ಯಕ್ಷರಾಗಿ ಸೈಯದ್ ತ್ವಾಹಾ ಬಾಫಕಿ ತಂಙಳ್, ಮುಖ್ಯ ಸಲಹೆಗಾರರಾಗಿ ಹಾಜಿ ಎಂ.ಕೆ.ಬ್ಯಾರಿ ಕಕ್ಕಿಂಜೆ, ಅಧ್ಯಕ್ಷರಾಗಿ ಹುಸೈನ್ ಹಾಜಿ ಕಿನ್ಯ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಇಕ್ಬಾಲ್ ಕಣ್ಣಂಗಾರ್, ಕೋಶಾಧಿಕಾರಿಯಾಗಿ ಇಬ್ರಾಹೀಂ ಹಾಜಿ ಕಿನ್ಯ, ಸಂಘಟನಾ ಕಾರ್ಯದರ್ಶಿಯಾಗಿ ಎಸ್.ಯೂಸುಫ್ ಅರ್ಲಪದವು, ಉಪಾಧ್ಯಕ್ಷರಾಗಿ ಹಾಜಿ ಎಂ.ಇ.ಮೂಳೂರು, ಅಬ್ದುಲ್ಲತೀಫ್ ಮುಲ್ಕಿ, ಹಾಜಿ ಮುಹಮ್ಮದ್ ಕುಂಞಿ ಅಡ್ಕ, ಅಬ್ದುರ್ರಝಾಕ್ ಹಾಜಿ ನಾಟೆಕಲ್, ಹಸನಬ್ಬ ಕೊಲ್ನಾಡ್, ಹಾಜಿ ಎಸ್.ಕೆ.ಅಬ್ದುಲ್ ಖಾದರ್ ಉಚ್ಚಿಲ, ಜೊತೆ ಕಾರ್ಯದರ್ಶಿಯಾಗಿ ಕಮಲ್ ಅಜ್ಜಾವರ, ಕಮರುದ್ದೀನ್ ಗುರುಪುರ, ಬದ್ರುದ್ದೀನ್ ಹೆಂತಾರ್, ಇ.ಕೆ.ಇಬ್ರಾಹೀಂ ಕಿನ್ಯ, ನವಾಝ್ ಕೋಟೆಕಾರ್, ಲೆಕ್ಕ ಪರಿಶೋಧಕರಾಗಿ ಅಬ್ದುಲ್ಲ ಪೆರುವಾಯಿ, ಕಚೇರಿ ಕಾರ್ಯದರ್ಶಿಯಾಗಿ ಸಮೀರ್ ಕಲ್ಲಾರೆ, ಸಂಚಾಲಕರಾಗಿ ಮುಹಮ್ಮದ್ ಶುಕೂರ್ ಮಣಿಲ, ಅಬ್ದುರ್ರಹ್ಮಾನ್ ಸಜಿಪ, ರಫೀಕ್ ಆತೂರು, ಹಾಜಿ ಅಬ್ದುರ್ರಝಾಕ್ ಜಲ್ಲಿ, ಅಬ್ದುಲ್ಲ ಹಾಜಿ ಬೀಜಾಡಿ, ಹಾಜಿ ಅಬ್ದುರ್ರಹ್ಮಾನ್ ಸಂಟ್ಯಾರ್, ಇಕ್ಬಾಲ್ ಕುಂದಾಪುರ, ಹನೀಫ್ ಅರ್ಯಮೂಲೆ, ರಝಾಕ್ ಮುಟ್ಟಿಕಲ್, ಹಾಜಿ ಎಸ್.ಕೆ.ಅಬ್ದುಲ್ ಖಾದರ್ ಉಚ್ಚಿಲ, ಸಲಹೆಗಾರರಾಗಿ ಇಬ್ರಾಹೀಂ ಸಖಾಫಿ ಕೆದಂಬಾಡಿ, ಅಬ್ದುಲ್ಲಾ ಮುಸ್ಲಿಯಾರ್ ಕುಡ್ತಮುಗೇರು, ಸೈಯದ್ ಅಸ್ಗರ್ ಅಲಿ ತಂಙಳ್ ಕೋಲ್ಪೆ, ಅಬೂಬಕರ್ ಮದನಿ ಕೆಮ್ಮಾರ ಆಯ್ಕೆಯಾದರು.
ಮಂಗಳೂರು ವಿಜಯ ಬ್ಯಾಂಕ್ ವಲಯ ಕಚೇರಿ ಉಪ ಮಹಾಪ್ರಬಂಧಕ ಸುರೇಂದ್ರ ಹೆಗ್ಡೆ ಕಾರ್ಯಾಗಾರ ಉದ್ಘಾಟಿಸಲಿದ್ದಾರೆ. ಪುತ್ತೂರು ಗೇರು ಸಂಶೋಧನಾ ನಿರ್ದೇಶ ನಾಲಯದ ನಿವೃತ್ತ ಹಿರಿಯ ವಿಜ್ಞಾನಿ ಡಾ. ಯಧು ಕುಮಾರ್ ಹಾಗೂ ಹಿರಿಯ ವಿಜ್ಞಾನಿ ಡಾ.ಗಂಗಾಧರ ನಾಯಕ್ ಸಂಪನ್ಮೂಲ ವ್ಯಕ್ತಿ ಯಾಗಿರುವರು ಎಂದು ತಿಳಿಸಿದರು. ಗ್ರಾಮೀಣ ಭಾಗದಲ್ಲಿ ಕೃಷಿ ಮತ್ತು ಇತರ ಪ್ರೋತ್ಸಾಹ ಚಟುವಟಿಕೆಗಾಗಿ ಪ್ರತಿಷ್ಠಾನ ಶ್ರಮಿ ಸಲಿದ್ದು, ಈಗಾಗಲೇ ವಿಜಯಾ ಬ್ಯಾಂಕ್ನಿಂದ ಪ್ರತಿಷ್ಠಾನಕ್ಕೆ 3 ಕೋಟಿ ರೂ. ನಿಧಿ ನೀಡಲಾಗಿದೆ. ಇದನ್ನು ಠೇವಣಾತಿ ಇಟ್ಟು, ಇದರ ಬಡ್ಡಿ ಹಣದಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊ ಳ್ಳಲಾಗುವುದು. ಪ್ರತಿಷ್ಠಾನದಲ್ಲಿ ಈಗಾಗಲೇ 3 ಸಾವಿರ ಸದಸ್ಯರಿದ್ದಾರೆ. ಹುಬ್ಬಳ್ಳಿ, ಧಾರವಾಡ, ಮಂಡ್ಯ, ಹಾವೇರಿಗೆ ವಿಸ್ತರಿಸುವ ಉದ್ದೇಶವಿದೆ ಎಂದು ಹೇಳಿದರು.