×
Ad

ಕಾಸರಗೋಡು: ಸಿಪಿಎಂ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

Update: 2016-04-22 14:28 IST

ಕಾಸರಗೋಡು, ಎ. 22: ಕೇರಳ ವಿಧಾನಸಭಾ ಚುನಾವಣೆಯ  ಅಧಿಸೂಚನೆ ಹೊರ ಬೀಳುತ್ತಿದ್ದಂತೆ ಅಭ್ಯರ್ಥಿಗಳು ನಾಮಪತ್ರ  ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಸಿಪಿಎಂ ಅಭ್ಯರ್ಥಿಗಳು  ನಾಮಪತ್ರ  ಸಲ್ಲಿಸಿದ್ದಾರೆ. 

ಮಂಜೇಶ್ವರದ ಸಿಪಿಎಂ ಅಭ್ಯರ್ಥಿ ಸಿ . ಎಚ್ ಕುನ್ಚ೦ಬು ಮತ್ತು ತ್ರಿಕ್ಕರಿಪುರದ ಸಿಪಿಎಂ ಅಭ್ಯರ್ಥಿ ಎಂ. ರಾಜಗೋಪಾಲ್  ಇಂದು ಮಧ್ಯಾಹ್ನ  ಚುನಾವಣಾಧಿಕಾರಿ ಇ . ದೇವದಾಸ್ ರಿಗೆ ನಾಮಪತ್ರ  ಸಲ್ಲಿಸಿದ್ದು,  ಮೊದಲ ದಿನವೇ ಎರಡು ನಾಮಪತ್ರ ಸಲ್ಲಿಕೆ ಯಾಗಿವೆ.


ವಿದ್ಯಾನಗರದಲ್ಲಿರುವ  ಸಿಪಿಎಂ ಪಕ್ಷದ ಜಿಲ್ಲಾ ಕಚೇರಿ ಯಿಂದ  ಬೆಂಬಲಿಗರ ಮೆರವಣಿಗೆ ಮೂಲಕ  ತೆರಳಿದ  ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.
 ಸಿಪಿಎಂ  ಜಿಲ್ಲಾ ಕಾರ್ಯದರ್ಶಿ ಕೆ . ಪಿ ಸತೀಶ್ಚ೦ದ್ರನ್, ಪಿ. ರಾಘವನ್ , ಎಂ . ವಿ ಬಾಲಕೃಷ್ಣನ್ ಮಾಸ್ಟರ್, ಕೆ . ವಿ ಕುನ್ಚಿ ರಾಮನ್, ಕೆ . ಕುನ್ಚಿರಾಮನ್,  ಗೋವಿಂದನ್ ಪಲ್ಲಿಕಾಪಿಲ್, ಟಿ. ಕೃಷ್ಣನ್ , ಬಿ . ವಿ ರಾಜನ್ , ಸಿ .ಪಿ ಬಾಬು , ಎಂ . ಅನಂತನ್ ನಂಬ್ಯಾರ್, ಕೃಷ್ಣನ್ ನಾಯರ್ , ಎನ್. ಪಿ  ದಾಮೋದರನ್ , ಅಜೀಜ್ ಕಡಪ್ಪುರ, ಕೆ. ಎಸ್ ಫಕ್ರುದ್ದೀನ್  ಮೊದಲಾದವರು ಜೊತೆ ಗಿದ್ದರು.


ಎಡರಂಗದ ಉಳಿದ ಅಭ್ಯರ್ಥಿಗಳಾದ ಕೆ . ಕುನ್ಚಿ ರಾಮನ್ ( ಉದುಮ), ಡಾ . ಎ . ಎ ಅಮೀನ್ ( ಕಾಸರಗೋಡು ) , ಇ . ಚಂದ್ರಶೇಖರನ್ ( ಕಾಞ೦ಗಾಡ್) ಎಪ್ರಿಲ್ 25 ರಂದು ನಾಮಪತ್ರ  ಸಲ್ಲಿಸುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News