×
Ad

ಭಟ್ಕಳ: ನೀರಿನ ಸಮಸ್ಯೆಗೆ ಸ್ಪಂಧಿಸದಿದ್ದರೆ ಹುಷಾರ್! ಅಧಿಕಾರಿಗಳಿಗೆ ಆರ್ವಿಡಿ ಎಚ್ಚರಿಕೆ

Update: 2016-04-23 18:15 IST

ಭಟ್ಕಳ: ನೀರಿನ ಸಮಸ್ಯೆಒಂದು ಮಾನವೀಯ ಸಮಸ್ಯೆಯಾಗಿದ್ದುಇದರಲ್ಲಿಯವುದೇಜಾತಿ, ಪಕ್ಷ, ಪಂಥಎನ್ನುವ ಬೇಧ ಭಾವವಿಲ್ಲ. ಜನರಕಷ್ಟಕಾಲದಲ್ಲಿ ಅಧಿಕಾರಿಗಳು ತಕ್ಷಣ ಸ್ಪಂಧಿಸಬೇಕು. ಇದು ಮಾನವೀಯ ಸಮಸ್ಯೆಯಾಗಿದ್ದು ಸ್ಪಂಧಿಸದೇಇದ್ದರೆ ಹುಷಾರ್!ಇದುಆರ್. ವಿ. ದೇಶಪಾಂಡೆಯವರು ಭಟ್ಕಳ ತಾಲೂಕಿನಕುಡಿಯುವ ನೀರಿನ ಸಮಸ್ಯೆಯಕುರಿತು ಪುರಸಭಾ ಸಭಾ ಭವನದಲ್ಲಿ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಕಡಕ್‌ಆದೇಶ.

ಸಭೆಯಲ್ಲಿ ಉಪಸ್ಥಿತರಿದ್ದ ಸಹಾಯಕಆಯುಕ್ತಚಿದಾನಂದ ವಠಾರೆಅವರುತಾಲೂಕಿನಲ್ಲಿ 16 ಗ್ರಾಮ ಪಂಚಾಯತ್‌ಗಳಲ್ಲಿ 10ರಲ್ಲಿ ನೀರಿನಅಭಾವತಲೆದೋರಿದೆ, 52 ಮಜಿರೆಗಳಿಗೆ ಈಗಾಗಲೇ ನೀರುಕೊಡುತ್ತಿದ್ದುಇನ್ನಾವುದೇಕಡೆಯಿಂದದೂರು ಬಂದಿಲ್ಲ ಎಂದರು.ಕಳೆದ ಬಾರಿ ಶೇ.22 ರಿಂದ 30ರಷ್ಟು ಕಡಿಮೆ ಮಳೆ ಬಿದ್ದಿದ್ದುಅಲ್ಲದೇ ಕೆಲವೆಡೆಉಪ್ಪು ನೀರು ಬಾವಿಯಲ್ಲಿ ನುಗ್ಗಿ ತೀವ್ರ ಸಮಸ್ಯೆಗೆಕಾರಣವಾಗಿದೆಎಂದೂ ಹೇಳಿದರು.

ಶಾಸಕ ಮಂಕಾಳ ವೈದ್ಯ ನೀರಿನಕೊರತೆಇರುವಲ್ಲಿ ಸರಿಯಾಗಿ ನೀರುಕೊಡುತ್ತಿಲ್ಲ.ಕೆಲವೆಡೆಗಳಲ್ಲಿ ಎರಡು ದಿನಕ್ಕೊಮ್ಮೆ ನೀರುಕೊಡುತ್ತಾರೆ.ನೀರಿನ ಸರಬರಾಜುತಕ್ಷಣ ಸರಿಯಾಗಬೇಕುಎಂದು ಆಗ್ರಹಿಸಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಸಾಂಬಾರು ಮಂಡಳಿಯ ಅಧ್ಯಕ್ಷ ಹಾಗೂ ತಂಜೀಂಅಧ್ಯಕ್ಷ ಮುಝಮ್ಮಿಲ್‌ಖಾಜಿಯಾ ಹಲವೆಡೆ ನೀರಿಗಾಗಿತೀವ್ರತೊಂದರೆಅನುಭವಿಸುತ್ತಿದ್ದಾರೆ.ನಗರದ ಗೌಸಿಯಾ ಸ್ಟ್ರೀಟ್‌ನಲ್ಲಿಯ ಪುರಸಭೆಯಯು.ಜಿ.ಡಿ.ಟ್ಯಾಂಕ್‌ನಿಂದಾಗಿ ಸುಮಾರು 200-300 ಬಾವಿಗಳು ಹಾಳಾಗಿದ್ದು ನೀರಿನ ಸಮಸ್ಯೆ ಹೆಚ್ಚಲು ಕಾರಣವಾಗಿದೆ. ತಕ್ಷಣಅಲ್ಲಿಯಯು.ಜಿ.ಡಿ. ವೆಲ್‌ಗೆಕಾಯಕಲ್ಪವಾಗಬೇಕು.ಶರಾಬಿ ಹೊಳೆಗೆ ಹೊಲಸು ನೀರು ಹೋಗುವುದನ್ನುತಡೆಗಟ್ಟಬೇಕು.ಶರಾಬಿ ಹೊಳೆಯಲ್ಲಿ ಹೂಳು ತುಂಬಿದ್ದು ಕಳೆದ ಮಳೆಗಾದಲ್ಲಿ ಓರ್ವಯುವಕ ಬಿದ್ದು ಮೃತಪಟ್ಟಿದ್ದುಇನ್ನೂತನಕಆತನದೇಹ ಪತ್ತೆಯಾಗಿಲ್ಲಎಂದರು.

ಕಡವಿನಕಟ್ಟೆಡ್ಯಾಂ ಸೈಟ್‌ನಲ್ಲಿ ಈ ಹಿಂದೆರಿಪೇರಿಗೆಂದು ಸುರಿದ ಸುಮಾರು 40 ಲೋಡ್ ಮಣ್ಣು ಹಾಗೇ ಇದ್ದುಅದನ್ನು ಹೊರತೆಗೆದರೆ ಭಟ್ಕಳ ತಾಲೂಕಿಗೆ ಸಾಕಾಗುವಷ್ಟು ನೀರುದೊರೆಯುತ್ತದೆ.ಇದರಿಂದ ನೀರಿನ ಸಮಸ್ಯೆಅರ್ಧ ಪರಿಹಾರವಾಗುತ್ತದೆಎಂದು ಪುರಸಭಾ ಸದಸ್ಯ ಕೆ.ಎಂ.ಅಷ್ಪಾಕ್ ಹೇಳಿದರು.

ಜನತೆಗೆಯಾವುದೇತೊಂದರೆಯಾಗದಂತೆ ಅಧಿಕಾರಿಗಳು ಕೆಲಸ ಮಾಡಬೇಕು. ಯಾವುದೇ ಅಧಿಕಾರಿಗಳು ಸ್ವಸ್ಥಾನ ಬಿಡಬಾರದು.ಮೇವು ಕಡಿಮೆಯಾಗುವ ಸಂಭವವಿದ್ದರೆ, ಅರಣ್ಯ ಇಲಾಖೆ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮೊದಲೇ ಸಂಗ್ರಹಿಸಬೇಕು.ಸಮಸ್ಯೆ ಬರುವ ಮೊದಲೇ ಪರಿಹಾರ ಮಾಡಿಕೊಳ್ಳಲು ಸೂಚಿಸಿದರು.ಕುಡಿಯುವ ನೀರಿನ ಕಾಮಗಾರಿಗಳು ಎಲ್ಲೆಲ್ಲಿ ನಡೆಯುತ್ತಿದೆ ಅವುಗಳನ್ನು ಜೂ.15 ಒಳಗಾಗಿ ಪೂರೈಸಲುಕ್ರಮ ಕೈಗೊಳ್ಳಬೇಕು. ನೀರಿನಅವಶ್ಯಕತೆಯಿರುವಲ್ಲಿಯಾವುದೇ ಖಾಸಗೀ ಬೋರ್‌ವೆಲ್‌ಗಳಲ್ಲಿರುವ ನೀರನ್ನುಖರೀಧಿ ಮಾಡಿಜನತೆಗೆಒದಗಿಸುವಂತೆಯೂದೇಶಪಾಂಡೆ ಸೂಚಿಸಿದರು.

ಶಾಸಕ ಮಂಕಾಳ ವೈದ್ಯ, ಜಿ.ಪಂ. ಸದಸ್ಯರಾದಆಲ್ಬರ್ಟಡಿಕೋಸ್ತ, ಜಯಶ್ರೀ ಮೊಗೇರ, ಸಿಂಧು ಭಾಸ್ಕರ ನಾಯ್ಕ, ಜಿಲ್ಲಾಧಿಕಾರಿಉಜ್ವಲ್‌ಕುಮಾರ್‌ಘೋಷ್, ಜಿ.ಪಂ.ಕಾರ್ಯ ನಿರ್ವಹಣಾಧಿಕಾರಿರಾಮಪ್ರಸಾತ್‌ಮನೋಹರ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News