×
Ad

ಕಾಸರಗೋಡು: ರಸ್ತೆ ಅಪಘಾತ: ಓರ್ವ ಮೃತ್ಯು

Update: 2016-04-24 11:10 IST

ಕಾಸರಗೋಡು, ಎ. 24: : ಸ್ಕೂಟರ್ - ಜೀಪು ನಡುವೆ ಸಂಭವಿಸಿದ ಅಪಘಾತದಲ್ಲಿ  ಸ್ಕೂಟರ್ ಸವಾರ ಮೃತಪಟ್ಟು, ಸಹ ಸವಾರ ಗಂಭೀರ ಗಾಯಗೊಂಡ ಘಟನೆ ಶನಿವಾರ ತಡರಾತ್ರಿ  ಮುಳಿಯಾರು ಸಮೀಪದ ಪೊವ್ವಲ್ ನಲ್ಲಿ ನಡೆದಿದೆ.

ಮೃತರನ್ನು ಮಧೂರು   ಪಟ್ಲದ  ಸುದೀಶ್ (24) ಎಂದು ಗುರುತಿಸಲಾಗಿದೆ.  ಸ್ನೇಹಿತ ಮೀಪುಗುರಿಯ ಮನೋಜ್ ರನ್ನು  ಆಸ್ಪತ್ರೆಗೆ  ದಾಖಲಿಸಲಾಗಿದೆ.
ಮುಳಿಯಾರು ನಲ್ಲಿ ನಡೆದ ಕಾರ್ಯಕ್ರಮಕ್ಕೆ  ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ ಕಾಸರಗೋಡು ಕಡೆಗೆ ಬರುತ್ತಿದ್ದ ಜೀಪು ನಡುವೆ ಅಪಘಾತ ನಡೆದಿದೆ .
 ಸುದೀಶ್  ಕೂಲಿ ಕಾರ್ಮಿಕನಾಗಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News