ಸಾಲಗಾರರ ಕಾಟ: ಪೊಲೀಸರ ಮುಂದೆಯೇ ತಾಯಿ-ಮಗ ವಿಷ ಸೇವಿಸಿ ಜೀವ ತೆತ್ತರು!

Update: 2016-04-27 11:34 GMT

ಲುಧಿಯಾನ, ಎಪ್ರಿಲ್ 27: ಪಂಜಾಬ್‌ನ ಕರ್ನಾಲಾದಲ್ಲಿ ರೈತರಾದ ತಾಯಿ-ಮಗ ಪೊಲೀಸರ ಎದುರೇ ವಿಷಸೇವಿಸಿ ಮೃತ್ಯುವನ್ನಪ್ಪಿದ ಘಟನೆ ವರದಿಯಾಗಿದೆ. ರೈತ ಮೂರು ಲಕ್ಷ ರೂಪಾಯಿ ಸಾಲಗಾರನಾಗಿದ್ದು ಪೊಲೀಸರು ಅವನನ್ನು ವಿಷ ಸೇವಿಸದಂತೆ ಹೇಳಿದರೂ ಕೇಳಿರಲಿಲ್ಲ. ಕರ್ನಾಲಾ ಜಿಲ್ಲೆಯ ಜೋಧಪುರದಲ್ಲಿ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವರದಿಯಾಗಿರುವ ಪ್ರಕಾರ ಸಾಲನೀಡಿದವರು ಹಣ ನೀಡದ ರೈತನ ಜಮೀನನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳಲು ಪೊಲೀಸರೊಂದಿಗೆ ಬಂದಿದ್ದರು. ರೈತ ಸಾಲ ಸಂದಾಯ ಮಾಡಲು ಅವರಲ್ಲಿ ಸಮಯ ಕೇಳಿದರೂ ಅವರು ಒಪ್ಪದೆ ಜಮೀನನ್ನು ಬರೆಸಲು ಪ್ರಯತ್ನಪಟ್ಟಿದ್ದರು ಎಂದುಸ್ಥಳೀಯರು ತಿಳಿಸಿದ್ದಾರೆ.

ಮೃತ ರೈತ ಇತರಜೊತೆ ಮೊದಲು ಧರಣಿ ನಡೆಸಿದ್ದು ನಂತರ ತನ್ನ ತಾಯಿ ಮತ್ತು ಆತ ಪೊಲೀಸರ ಮುಂದೆ ಕೀಟನಾಶಕ ಕುಡಿದಿದ್ದಾನೆ. ಪೊಲೀಸರು ಅವನನ್ನು ಎಷ್ಟೇ ವಿನಂತಿಸಿದರೂ ಅವನು ಅದನ್ನು ತಲೆ ಹಚ್ಚಿಕೊಳ್ಳಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ವಿಷ ಸೇವಿಸಿದ ರೈತ ಮತ್ತು ಆತನ ತಾಯಿ ಸ್ಥಳದಲ್ಲೇ ಮೃತರಾಗಿದ್ದು ಮೃತವ್ಯಕ್ತಿ ಯುವ ರೈತನಾಗಿದ್ದಾನೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News