ಮಹಾಲಿಂಗೇಶ್ವರ ದೇವಸ್ಥಾನದ ಬಳಿ ತಡೆಗೋಡೆಗೆ ಶಿಲಾನ್ಯಾಸ
Update: 2016-04-27 17:07 IST
ಪುತ್ತೂರು: ಶಾಸಕರ ವಿಶೇಷ ಅನುದಾನದಿಂದ ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ರೂ.50ಲಕ್ಷ ವೆಚ್ಚದಲ್ಲಿ ತಡೆಗೊಡೆ ರಚನೆಗೆ ರಾಜ್ಯ ಸಂಸದೀಯ ಕಾರ್ಯದರ್ಶಿ ಶಾಸಕಿ ಶಕುಂತಳಾ ಶೆಟ್ಟಿ ಅವರು ಶಿಲಾನ್ಯಾಸ ನೆರವೇರಿಸಿದರು.
ದೇವಳದ ಸಭಾಭವನದ ಬಳಿಯ ತೋಡಿಗೆ ನಿರ್ಮಾಣವಾಗಲಿರುವ ತಡೆಗೋಡೆ ಪಕ್ಕದಲ್ಲಿ ಶಿಲಾನ್ಯಾಸ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಜಯಂತಿ ನಾಯಕ್, ಸದಸ್ಯ ಹೆಚ್. ಮಹಮ್ಮದ್ ಆಲಿ, ಆರ್ಯಾಪು ಸೊಸೈಟಿಯ ಸದಸ್ಯ ಸದಾನಂದ ಶೆಟ್ಟಿ ಕೂರೇಲು, ದೇವಳದ ಆಡಳಿತಾಧಿಕಾರಿ ಜಗದೀಶ್ ಎಸ್, ಮನಮೋಹನ್, ದೇವಳದ ಕಚೇರಿ ವ್ಯವಸ್ಥಾಪಕ ಜಗದೀಶ್ ಮತ್ತು ಸಣ್ಣನೀರಾವರಿ ಇಲಾಖೆ ಇಂಜಿನಿಯರ್ ಉಪಸ್ಥಿತರಿದ್ದರು.