ಮತಗಟ್ಟೆಯಲ್ಲೇ ತನ್ನ ತಂದೆಯ ಕೊಲೆ ಆರೋಪಿಯನ್ನು ಹಿಡಿದ !

Update: 2016-04-27 12:20 GMT

ಕೋಲ್ಕತ್ತಾ , ಎ. 27 : ಪಶ್ಚಿಮ ಬಂಗಾಳದ ಹರೋರದ ಮತಗಟ್ಟೆ ಯೊಂದರಲ್ಲಿ ಮಂಗಳವಾರ ನಾಟಕೀಯ ಬೆಳವಣಿಗೆಯೊಂದು ನಡೆದಿದೆ. ಇತ್ತೀಚಿಗೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕೊಲೆಗೀಡಾದ ಸಿಪಿಎಂ ಕಾರ್ಯಕರ್ತನ ಕೊಲೆ ಆರೋಪಿಯೊಬ್ಬ ಮತದಾನ ಮಾಡಲು ಬಂದಾಗ ಕೊಲೆಯಾದವರ ಪುತ್ರ ಆತನನ್ನು ಮತಗಟ್ಟೆಯಲ್ಲೇ ಹಿಡಿದ ಘಟನೆ ನಡೆದಿದೆ. 

ಸಿಪಿಎಂ ಕಾರ್ಯಕರ್ತ ನೂರ್ ಇಸ್ಲಾಂ ಮಿಸ್ತ್ರಿ ಅವರನ್ನು ಇತ್ತೀಚಿಗೆ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಹನ್ನೊಂದು ಮಂದಿ ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಹೆಸರಿಸಲಾಗಿತ್ತು. ನಾಲ್ಕು ಮಂದಿಯನ್ನು ಬಂಧಿಸಲಾಗಿತ್ತು. 

ಆದರೆ ಮಿಸ್ತ್ರಿ ಅವರ ಪುತ್ರ ರಜೀಬ್ ಗೆ ಇದರಿಂದ ತೃಪ್ತಿ ಯಾಗಿರಲಿಲ್ಲ. ಸೋಮವಾರ ಮತದಾನ ನಡೆಯುವಾಗ ತನ್ನ ತಂದೆಯನ್ನು ಕೊಂದವರು ಮತದಾನ ಮಾಡಲು ಬಂದೇ ಬರುತ್ತಾರೆ ಎಂದು ಗೊತ್ತಿದ್ದ ರಜೀಬ್ ಬೂತ್ ನಂಬರ್ 56 ರಲ್ಲಿ ಸಿಪಿಎಂ ಪಕ್ಷದ ಏಜೆಂಟ್ ಆಗಿ ಕುಳಿತುಕೊಂಡ. 
ತನ್ನ ತಂದೆಯನ್ನು ಕೊಂದ ತಂಡದಲ್ಲಿ ಇದ್ದನೆನ್ನಲಾದ ಹಫಿಜ್ಹುರ್ ಇಸ್ಲಾಂ ಮತಗಟ್ಟೆ ಯೊಳಗೆ ಬರುತ್ತಲೇ ಆತನನ್ನು ಹಿಡಿದ ರಜೀಬ್ ಅಲ್ಲಿದ್ದ ಸಿ ಆರ್ ಪಿ ಎಫ್ ಸಿಬ್ಬಂದಿಗೆ ಆತನನ್ನು ಒಪ್ಪಿಸಿದ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News