ಬ್ಯಾಂಕಿಂಗ್ ಕ್ಷೇತ್ರದ ಕುರಿತು ಮಾಹಿತಿ ಕಾರ್ಯಕ್ರಮ

Update: 2016-05-02 17:56 GMT


 ಉಡುಪಿ, ಮೇ 2: ಹಿರಿಯಡ್ಕದ ಸರ ಕಾರಿ ಪದವಿ ಕಾಲೇಜಿನ ಕಾಮರ್ಸ್ ಮತ್ತು ಮ್ಯಾನೇಜ್‌ಮೆಂಟ್ ಅಸೋ ಸಿಯೇಶನ್‌ನ ವತಿಯಿಂದ ಕಾರ್ಪೊ ರೇಶನ್ ಬ್ಯಾಂಕ್‌ನ ವಲಯ ಕಚೇರಿ ಉಡುಪಿ ಶಾಖೆಯ ಆಶ್ರಯದಲ್ಲಿ ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆ ಕುರಿತು ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ವಲಯ ಕಚೇರಿಯ ಪ್ರಬಂಧಕ ನವೀನ್ ಎಸ್. ವಿದ್ಯಾರ್ಥಿಗಳಿಗೆ ಬ್ಯಾಂ ಕಿಂಗ್ ಕ್ಷೇತ್ರದ ಕ್ಷಿಪ್ರ ಬದಲಾವಣೆ, ಹೊಸ ಅವಿಷ್ಕಾರ ಹಾಗೂ ಆಧುನಿಕ ತಂತ್ರ ಜ್ಞಾನಗಳಾದ ಕೋರ್ ಬ್ಯಾಂಕಿಂಗ್, ನೆಟ್ ಬ್ಯಾಂಕಿಂಗ್ ಮುಂತಾದವುಗಳ ಕುರಿತು ಮಾಹಿತಿ ನೀಡಿದರು. ಹಿರಿಯಡ್ಕ ಬ್ಯಾಂಕ್‌ನ ಪ್ರಬಂಧಕ ವೆಂಕಟೇಶ್ ಕಾಮತ್, ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ರಸಪ್ರಶ್ನೆ ಸ್ಪರ್ಧೆ ಯನ್ನು ಆಯೋಜಿಸಿ ಬಹುಮಾನಗಳನ್ನು ವಿತರಿಸಿದರು. ಬ್ಯಾಂಕ್‌ನ ಪ್ರಬಂಧಕ ಹರೀಶ್ ಹಾಗೂ ಸಹಾಯಕ ಮ್ಯಾನೇಜರ್ ಪುರುಷೋತ್ತಮ ಶೆಟ್ಟಿ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಸೋಜನ್ ಕೆ. ಜಿ. ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ಶಾಸ್ತ್ರ ಸಹ ಪ್ರಾಧ್ಯಾಪಕಿ ಸುಷ್ಮಾ ರಾವ್ ಕೆ. ಸ್ವಾಗತಿಸಿದರು. ಅರ್ಥಶಾಸ್ತ್ರ ಉಪನ್ಯಾಸಕಿ ಮಮತಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News