ಮಲ್ಯ ರಾಜೀನಾಮೆ ತಿರಸ್ಕೃತ; ಉಚ್ಚಾಟನೆ ಸನ್ನಿಹಿತ
Update: 2016-05-03 18:14 GMT
ಹೊಸದಿಲ್ಲಿ, ಮೇ 3: ವಿವಿಧ ಬ್ಯಾಂಕ್ಗಳಿಗೆ 9 ಸಾವಿರ ಕೋಟಿ ರೂ. ಹಣ ಬಾಕಿಯಿರಿಸಿ, ವಿದೇಶಕ್ಕೆ ಪರಾರಿಯಾಗಿರುವ ವಿಜಯ ಮಲ್ಯ ತನ್ನ ರಾಜ್ಯಸಭಾ ಸದಸ್ಯತ್ವಕ್ಕೆ ನೀಡಿರುವ ರಾಜೀನಾಮೆಯನ್ನು ರಾಜ್ಯಸಭಾ ಅಧ್ಯಕ್ಷ ಹಾಮೀದ್ ಅನ್ಸಾರಿ ಮಂಗಳವಾರ ತಿರಸ್ಕರಿಸಿದ್ದಾರೆ. ಮಲ್ಯ ಅವರ ರಾಜೀನಾಮೆ ಪತ್ರವು ಸಂಸತ್ನ ನಿಯಮಾವಳಿಗಳಿಗೆ ಅನುಗುಣವಾಗಿರದ ಕಾರಣ ಅವರ ರಾಜೀನಾಮೆಯನ್ನು ಸ್ವೀಕರಿಸಲಾಗ ದೆಂದು ಅನ್ಸಾರಿ ತಿಳಿಸಿದ್ದಾರೆ. ಇದರೊಂದಿಗೆ ಮೇಲ್ಮನೆಯಿಂದ ಮಲ್ಯ ಅವರ ಉಚ್ಚಾಟನೆ ಖಚಿತವಾಗಿದೆ.
ಮಲ್ಯ ಅವರು ಫ್ಯಾಕ್ಸ್ ಮೂಲಕ ಕಳುಹಿಸಿರುವ ರಾಜೀನಾಮೆ ಪತ್ರದಲ್ಲಿ ನಿಯಮಕ್ಕನುಸಾರವಾಗಿ ತನ್ನ ಸಹಿಯನ್ನು ನಮೂದಿಸಿಲ್ಲವೆಂದು ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ ಕೆ. ಶಂಶೀರ್ ಶರೀಫ್ ಅವರು ಮದ್ಯದೊರೆಗೆ ಬರೆದಿರುವ ಇಮೇಲ್ ಪತ್ರದಲ್ಲಿ ತಿಳಿಸಿದ್ದಾರೆ.