ಮೇ 6ರಂದು ಕೆನಡಾ ಮೂಲದ ಅಂತಾರಾಷ್ಟ್ರೀಯ ವಿದ್ವಾಂಸ ಶೇಖ್ ಅಬೂ ಉಮರ್ ಅಬ್ದುಲ್ ಅಝೀಝ್ ಮಂಗಳೂರಿಗೆ

Update: 2016-05-04 13:33 GMT

ಸೌತ್ ಕರ್ನಾಟಕ ಸಲಫಿ ಮೂವಮೆಂಟ್ (ರಿ)ಮಂಗಳೂರು ಇದರ ವತಿಯಿಂದ ಮೇ 6ರಂದು ಕುಆನ್‌ಸಂದೇಶ ಸಮಾವೇಶವು ಮಂಗಳೂರಿನ ಪುರಭವನದಲ್ಲಿ ಸಂಜೆ 4:30 ರಿಂದ ನಡೆಯಲಿದೆ.

ಸಮಾವೇಶದಲ್ಲಿ ಸೌತ್ ಕರ್ನಾಟಕ ಸಲಫಿ ಮೂಮೆಂಟ್ ಪ್ರಕಟಿಸಿದ ಪವಿತ್ರ ಕುಆನಿನ ಕನ್ನಡ ಭಾಷಾಂತರ ಬಿಡುಗಡೆ ಸಮಾರಂಭ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಕೆನಡಾದ ಖ್ಯಾತ ಅಂತಾರಾಷ್ಟ್ರೀಯ ವಿದ್ವಾಂಸ ಶೇಖ್ ಅಬೂ ಉಮರ್ ಅಬ್ದುಲ್ ಅಝೀಝ್ ಕೃತಿ ಬಿಡುಗಡೆ ನೆರವೇರಿಸಲಿರುವರು ಕುರಆನ್ ಮನುಕುಲಕ್ಕೆ ಅವತೀರ್ಣವಾದ ಅಂತಿಮ ಗ್ರಂಥ. ಕುಆನ್ ಅದ್ಭುತಗಳ ಅದ್ಭುತ ಎಂಬ ವಿಚಾರವಾಗಿ ಖ್ಯಾತ ವಿದ್ವಾಂಸ ವೌಲವಿ ಅಹ್ಮದ್ ಅನ ಉಪನ್ಯಾಸ ನೀಡಲಿರುವರು.

ಎಸ್ಕೆಎಸ್ಸೆಂನ ಅಧ್ಯಕ್ಷ ಯು.ಎನ್.ಅಬ್ದುರ್ರಝಾಕ್ ಅಧ್ಯಕ್ಷತೆ ವಹಿಸಲಿರುವರು. ಮುಖ್ಯ ಅತಿಥಿಯಾಗಿ ನಿವೃತ್ತ ಸಹಾಯಕ ಪೊಲೀಸ್ ಆಯುಕ್ತ ಮದನ್ ಗಾಂವ್ಕರ್, ಜಮೀಯತೆ ಅಹ್ಲೇ ಹದೀಸ್‌ನ ಉಪಾಧ್ಯಕ್ಷ ಬಾಬಾಖಾನ್ ಗುಲ್ಬರ್ಗ, ಉಡುಪಿ ದಅ್ವಾ ಸೆಂಟರ್‌ನ ಅಧ್ಯಕ್ಷ ಆತೀಫ್ ಹುಸೈನ್,ಮುಹಮ್ಮದ್ , ಆಡ್ ಪ್ರೊಸೆಸ್ ಬೆಂಗಳೂರಿನ ನಿರ್ದೇಶಕ ಫೌಝಾನ್ ಖಾನ್, ಪ್ರೊಡಕ್ಷನ್ ಮ್ಯಾನೇಜರ್ ಶಿವಕುಮಾರ್, ಬಾಬಾ ಅರ್ಷದ್ ಖಾನ್ ಬೆಂಗಳೂರು, ಯುನಿಟಿ ಅಕಾಡಮಿ ಆಫ್ ಎಜುಕೇಶನ್‌ನ ಚೇಮೆನ್ ಡಾ.ಐ.ಸಿ.ಪಿ.ಹಬೀಬುರ್ರಹ್ಮಾನ್,ಕೆ.ಎಂ.ಇಲ್ಯಾಸ್ ಅಹ್ಮದ್ ಬಾವಾ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಎಸ್ಕೆಎಸ್ಸೆಂನ ಪ್ರಧಾನ ಕಾರ್ಯದರ್ಶಿ ಬಶೀರ್ ಅಹ್ಮದ್ ಶಾಲಿಮಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News