×
Ad

ಕಾಸರಗೋಡು: ಯುವಕರ ಮಧ್ಯೆ ಘರ್ಷಣೆ; ಇಬ್ಬರಿಗೆ ಇರಿತ

Update: 2016-05-06 22:17 IST

ಕಾಸರಗೋಡು, ಮೇ 6: ಯುವಕರ ನಡುವೆ ನಡೆದ ಘರ್ಷಣೆಯಲ್ಲಿ ಇಬ್ಬರು ಇರಿತಕ್ಕೊಳಗಾದ ಘಟನೆ ಶುಕ್ರವಾರ ರಾತ್ರಿ ಕುಂಬಳೆ ಪೆರುವಾಡ್‌ನಲ್ಲಿ ನಡೆದಿದೆ.

ಪೆರುವಾಡ್‌ನ ಸಂಶುದ್ದೀನ್ (30) ಮತ್ತು ಹನೀಫ್(30) ಗಾಯಗೊಂಡಿದ್ದು, ಈ ಪೈಕಿ ಸಂಶುದ್ದೀನ್‌ರ ಸ್ಥಿತಿ ಗಂಭೀರವಾಗಿದೆ. ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

 ಕೊಪ್ಪರ ಬಜಾರ್‌ನಲ್ಲಿ ನಡೆಯುತ್ತಿದ್ದ ಪುಟ್ಬಾಲ್ ಪಂದ್ಯಾಟದ ವೇಳೆ ಬೈಕ್‌ನಲ್ಲಿ ಬಂದ ತಂಡವು ಈ ಕೃತ್ಯ ನಡೆಸಿದೆ. ಘಟನಾ ಸ್ಥಳಕ್ಕೆ ಕುಂಬಳೆ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News