ಮೇ 15 ರಂದು ಎಳತ್ತೂರಿನಲ್ಲಿ 'ಯೂತ್ ಸಮಾಗಮ'
Update: 2016-05-11 17:11 GMT
ಮುಲ್ಕಿ, ಮೇ 11: ಇಲ್ಲಿಗೆ ಸಮೀಪದ ಸಂತ ನಿರಂಕಾರಿ ಸತ್ಸಂಗ ಎಳತ್ತೂರು ಇದರ ವತಿಯಿಂದ 'ಯೂತ್ ಸಮಾಗಮ' ಕಾರ್ಯಕ್ರಮವು ಮೇ 15ರಂದು ಎಳತ್ತೂರು ಸತ್ಸಂಗ ಸಬಾಭವನದಲ್ಲಿ ಬೆಳಗ್ಗೆ 10 ಗಂಟೆಗೆ ರೆವರೆಂಟ್ ಸುನಿಲ್ ರಾತ್ರಾಜಿ ನೇತೃತ್ವದಲ್ಲಿ ನಡೆಯಲಿದೆ.
15 ವರ್ಷಗಳಿಂದ ಸಮಾಜಸೇವೆ ಮಾಡಿಕೊಂಡು ಬಂದಿರುವ ಎಳತ್ತೂರು ನಿರಂಕಾರಿ ಸತ್ಸಂಗವು ರಕ್ತದಾನ ಶಿಬಿರ, ಸ್ವಚ್ಛತಾ ಆಂದೊಲನ, ಬಡ ವಿದ್ಯಾರ್ಥಿಗಳು ಹಾಗೂ ಅನಾರೊಗ್ಯ ಪೀಡಿತರಿಗೆ ಸಹಾಯ ಧನ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕ್ಕೊಂಡು ಜನಾನುರಾಗಿಯಾಗಿದೆ ಎಂದು ಸಂಘಟಕ ರೆವರೆಂಟ್ ಸದಾಶಿವ ದೇವಾಡಿಗ ಪ್ರಕಟನೆಯಲ್ಲಿ ತಿಳಿಸಿದ್ದಾರೆ.