ಕೆಎಸ್ಟಿಎ ವತಿಯಿಂದ ಸಹಾಯಧನ ವಿತರಣೆ
Update: 2016-05-12 21:52 IST
ಮಂಜೇಶ್ವರ, ಮೇ 12: ಕೇರಳ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ ಉಪ್ಪಳ ಘಟಕದ ಸದಸ್ಯ ಮಜಲ್ ನಿವಾಸಿ ಮುಹಮ್ಮದ್ ಸಲೀಂ ಇತ್ತೀಚೆಗೆ ನಿಧನರಾಗಿದ್ದು, ಕೆಎಸ್ಟಿಎ ವತಿಯಿಂದ ಮೃತರ ಕುಟುಂಬಕ್ಕೆ ಸಹಾಯಧನ ವಿತರಿಸಲಾಯಿತು.
ಈ ಸಂದರ್ಭ ಕೆಎಸ್ಟಿಎ ರಾಜ್ಯ ಸಮಿತಿ ಸದಸ್ಯ ಬಾಲಕೃಷ್ಣ ಶೆಟ್ಟಿ ಕರಿಪ್ಪಾರ್, ಕಾಸರಗೋಡು ಜಿಲ್ಲಾಧ್ಯಕ್ಷ ಮೋಹನ್ ದಾಸ್ ಕುಂಬಳೆ, ಮಂಜೇಶ್ವರ ತಾಲೂಕು ಅಧ್ಯಕ್ಷ ರಾಮ ಪೊಯ್ಯಕಂಡ, ಉಪ್ಪಳ ಯೂನಿಟ್ ಅಧ್ಯಕ್ಷ ಸತೀಶ್ ಆಚಾರ್ಯ ಪ್ರತಾಪನಗರ, ಕಾರ್ಯದರ್ಶಿ ದಯಾನಂದ ಪ್ರತಾಪನಗರ ಜೊತೆಗಿದ್ದರು.