ಬೆಳ್ತಂಗಡಿಯಲ್ಲಿ ಶುಭಾರಂಭಗೊಂಡ ದಅವಾ ಕಾಲೇಜು
ಬೆಳ್ತಂಗಡಿ, ಮೇ 14: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಾವುದೇ ಸಮಾಜ ಪ್ರಗತಿಯನ್ನು ಸಾಧಿಸಬೇಕಾದರೆ ಶಿಕ್ಷಣ ಅತಿ ಅಗತ್ಯವಾಗಿದೆ. ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುವ ಮೂಲಕ ಪ್ರತಿಭಾವಂತ ಸಮಾಜವನ್ನು ರೂಪಿಸುವ ಕಾರ್ಯಕ್ಕೆ ಸಮಸ್ತ ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ದೇಶ ವಿದೇಶಗಳಲ್ಲಿಯೂ ಶಿಕ್ಷಣಸಂಸ್ಥೆಗಳನ್ನು ಆರಂಭಿಸಿ ಉತ್ತಮ ಶಿಕ್ಷಣ ನೀಡಲಾಗುತ್ತಿದೆ ಎಂದು ಸಮಸ್ತದ ಪ್ರಧಾನ ಕಾರ್ಯದರ್ಶಿ ಶೈಖುನಾ ಆಲಿಕುಟ್ಟಿ ಉಸ್ತಾದ್ ಹೇಳಿದ್ದಾರೆ.
ಬೆಳ್ತಂಗಡಿ ಜುಮ್ಮಾ ಮಸೀದಿ ಮೈದಾನದಲ್ಲಿ ದಾರುಸ್ಸಲಾಂ ಇಸ್ಲಾಮಿಕ್ ಕಾಂಪ್ಲೆಕ್ಸ್ ಮತ್ತು ಖಿಳ್ರಿಯಾ ಜುಮ್ಮಾ ಮಸೀದಿ ಇದರ ಜಂಟಿ ಸಹಯೋಗದಲ್ಲಿ ದಾರುಸ್ಸಲಾಂ ದಅ್ವ ಕಾಲೇಜಿಗೆ ಚಾಲನೆ ನೀಡಿ ಮಾತನಾಡಿದರು. ಪ್ರತಿಯೊಂದು ಮಗುವಿಗೂ ಉತ್ತಮ ಶಿಕ್ಷಣವನ್ನು ನೀಡುವ ಕಾರ್ಯ ಮಾಡಬೇಕಾಗಿದೆ ಅದಕ್ಕೆ ಇಂತಹ ಸಂಸ್ಥೆಗಳು ನೆರವಾಗುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ದ. ಕ ಜಿಲ್ಲಾ ಖಾಝಿ ಶೈಖುನಾ ತ್ವಾಕ ಅಹ್ಮದ್ ಮುಸ್ಲಿಯಾರ್, ಗುರು ಹಿರಿಯರ ಆಶೀರ್ವಾದದೊಂದಿಗೆ ನಡೆಯುತ್ತಿರುವ ಶಿಕ್ಷಣ ಸಂಸ್ಥೆಗಳು ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಕೊಡುಗೆಯನ್ನು ನೀಡುತ್ತಿವೆ ಎಂದರು.
ಸಮಾರಂಭದಲ್ಲಿ ಮೌಲಾನಾ ಅಬ್ದುಲ್ ಅಝೀಜ್ ದಾರಿಮಿ ಚೊಕ್ಕಬೆಟ್ಟು ದಿಕ್ಸೂಚಿ ಭಾಷಣ ಮಾಡಿದರು, ಕಕ್ಕಿಂಜೆ ಮುದರ್ರಿಸ್ ಐ.ಕೆ ಮೂಸಾ ದಾರಿಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೂಡಿಗೆರೆ ಖಾಜಿ ಎಂ.ಎಂ ಖಾಸಿಂ ಉಸ್ತಾದ್, ಅಡ್ವೊಕೇಟ್ ಹನೀಫ್ ಹಾದಮಿ ದೇಲಂಪಾಡಿ, ಬಿ.ಕೆ ಅಬ್ದುಲ್ ಖಾದರ್, ಹಸನಬ್ಬ ಚಾರ್ಮಾಡಿ, ಟಿ.ಎಂ ಸುಶೀದ್ ಸುಳ್ಯ, ಕಾಲೇಜಿನ ರೂವಾರಿಗಳಾದ ಝೈನುಲ್ ಅಬೆದಿನ್ ಜೆಫ್ರಿ ತಂಙಳ್, ಆಲಿತಂಙಳ್ ಕರಾವಳಿ, ಬದ್ರುದ್ದೀನ್ ತಂಙಳ್ ಮಂಜೇಶ್ವರ, ಹಾಗೂ ಇತರರು ಮಾತನಾಡಿ ಶುಭ ಹಾರೈಸಿದರು.
ಸಮಾರಂಭದಲ್ಲಿ ಅಲಿಕುಟ್ಟಿ ಉಸ್ತಾದ್, ಬಿ.ಎ ನಝೀರ್, ಬಿ.ಎಚ್. ಮುಹಮ್ಮದ್ ಮತ್ತಿತರ ಗಣ್ಯರನ್ನು ಕಾಲೇಜು ಕಮಿಟಿ ಮತ್ತು ಬೆಳ್ತಂಗಡಿ ರೇಂಜ್ ಜಂಇಯತುಲ್ ಮುಅಲ್ಲಿಮೀನ್ ವತಿಯಿಂದ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಅಲಿ ತಂಙಳ್ ಕುಂಬೋಳ್, ಅಹ್ಮದ್ ಪೂಕೋಯ ತಂಙಳ್ ಪುತ್ತೂರು, ಅಮೀರ್ ತಂಙಳ್ ಕಿನ್ಯ, ಹುಸೈನ್ ಬಾಅಲವಿ ತಂಙಳ್ ಕುಕ್ಕಾಜೆ, ಜುನೈದ್ ಜಿಫ್ರಿ ತಂಙಳ್ ಅತ್ತೂರು, ತ್ವಾಹಾ ಜಿಫ್ರಿ ತಂಙಳ್ ಅಡ್ಯಾರ್, ಹನೀಫ್ ಹುದವಿ ದೇಲಂಪಾಡಿ, ಪಿತಾಂಬರ ಹೆರಾಜೆ, ಸಂಶುದ್ದೀನ್ ದಾರಿಮಿ ಬೆಳ್ತಂಗಡಿ, ಶರೀಫ್ ಫೈಝಿ ಕಡಬ, ಅಶ್ರಫ್ ಫೈಝಿ ಪೂಂಜಾಲಕಟ್ಟೆ, ಅಬ್ದುಲ್ ಮಜೀದ್ ದಾರಿಮಿ ಪಾಂಡವರ ಕಲ್ಲು, ಉಮ್ಮರ್ ಮುಸ್ಲಿಯಾರ್ ಪಾಂಡವರ ಕಲ್ಲು, ಹುಸೈನ್ ದಾರಿಮಿ ರೆಂಜಲಾಡಿ, ಶರೀಫ್ ಪೊನ್ನಾನಿ, ಮೊದಿನಬ್ಬ ಹಾಜಿ ಮಂಗಳೂರು, ಅಬ್ಬಾಸ್ ಪಜೆಮಾರು ಕನ್ನಡಿಕಟ್ಟೆ, ಕೋಯ ಮುಸ್ಲಿಯಾರ್ ಮದ್ದಡ್ಕ, ಅಬ್ದುಲ್ ದಾರಿಮಿ ಪೆರಾಲ್ದಕಟ್ಟೆ, ಜಿ.ವೈ. ಅಬ್ದುರ್ರಝಾಕ್ ಮುಸ್ಲಿಯಾರ್ ಗೇರುಕಟ್ಟೆ, ಹಸನ್ ಅರ್ಶದಿ, ಹಮೀದ್ ಕಣ್ಣೂರು, ಅಬ್ದುಲ್ಲ ರಹ್ಮಾನಿ, ರಿಯಾಝ್ ಪೈಝಿ ಕಕ್ಕಿಂಜೆ, ಅಬ್ದುರ್ರಝಾಕ್ ಪೂಂಜಾಲಕಟ್ಟೆ, ಶೇಕುಂಞಿ ಬೆಳ್ತಂಗಡಿ, ಇ.ಕೆ. ಬಶೀರ್ ವಗ್ಗ, ಅಬ್ದುರ್ರಝಾಕ್ ಕನ್ನಡಿಕಟ್ಟೆ, ಹನೀಫ್ ಜಾರಿಗೆ ಬೈಲು, ಹನೀಫ್ ದೂಮಳಿಕೆ, ಸಿರಾಜ್ ಚಿಲಿಂಬಿ, ಇಲ್ಯಾಸ್ ಕಕ್ಕಿಂಜೆ, ಸ್ವಾಲಿ ಹಾಜಿ ಕಕ್ಕಿಂಜೆ, ಇಲ್ಯಾಸ್ ಕಿಲ್ಲೂರು, ನಝೀರ್ ಬೊಳ್ಮಿನಾರ್, ಕೆ.ಎ. ರಹ್ಮಾನ್ ಕಕ್ಕಿಂಜೆ, ಮುಹಮ್ಮದ್ ಶರೀಫ್ ಕಕ್ಕಿಂಜೆ, ಶಕೀಲ್, ಅಬ್ದುಲ್ಲ ದಾರಿಮಿ, ಅಬೂಬಕರ್ ಮುಸ್ಲಿಯಾರ್ ಮತ್ತಿತರರು ಉಪಸ್ಥಿತರಿದ್ದರು.
ಬಶೀರ್ ದಾರಿಮಿ ಸ್ವಾಗತಿಸಿದರು. ಕೆ.ಎಂ. ಕೊಡುಂಗಾಯಿ ಕಾರ್ಯಕ್ರಮ ನಿರೂಪಿಸಿದರು.