ಚಿತ್ತಾರದ ‘ಪಂಚಮ ಸಂಭ್ರಮ’ ಬೇಸಿಗೆ ಶಿಬಿರ ಯಶಸ್ವಿ

Update: 2016-05-15 13:19 GMT

ಮಂಗಳೂರು, ಮೇ 15:ನಗರದ ಆಕಾಶಭವನದ ಚಿಂತನ ಸಾಂಸ್ಕೃತಿಕ ಬಳಗದ ವತಿಯಿಂದ ಐದನೇ ವರ್ಷದ ಬೇಸಿಗೆ ಶಿಬಿರ ಪಂಚಮ ಸಂಭ್ರಮ ಯಶಸ್ವಿಯಾಗಿ ನಡೆಯಿತು.

ಆಕಾಶಭವನದ ಅಂಗನವಾಡಿ ಕೇಂದ್ರದಲ್ಲಿ ಮೇ 12ರಂದು ಉದ್ಘಾಟನೆಗೊಂಡ ಈ ಶಿಬಿರದಲ್ಲಿ 78 ಮಂದಿ ಚಿಣ್ಣರು ಭಾಗವಹಿಸಿದ್ದರು.

ಆವೆ ಮಣ್ಣಿನ ಆಕೃತಿ, ಮರಳು ಶಿಲ್ಪ, ಗಾಳಿಪಟ, ಚಿತ್ರಕತೆ, ಅಂದದ ಕೈಬರಹ, ವ್ಯಕ್ತಿತ್ವ ವಿಕಸನ, ಸರಳ ವಿಜ್ಞಾನ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ನಾಡಿನ ಹೆಸರಾಂತ ಸಂಪನ್ಮೂಲ ವ್ಯಕ್ತಿಗಳು ಮಕ್ಕಳೊಂದಿಗೆ ತಮ್ಮ ಅನುಭವ ಹಂಚಿಕೊಂಡರು.

ಹೆಸರಾಂತ ಕಲಾವಿದರಾದ ಮೈಮ್ ರಾಮದಾಸ್, ಪ್ರೇಮನಾಥ ಮರ್ಣೆ, ಅಕ್ಷತಾ ಕುಡ್ಲ, ಶೋಭಾ ಮಸ್ಕರೇನಸ್ ಮೊದಲಾದವರು ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News