ಕಾರ್ಕಳ: ಕಾರು ಢಿಕ್ಕಿಯಾಗಿ ಪುರಸಭೆ ಸಿಬ್ಬಂದಿಗೆ ಗಾಯ

Update: 2016-05-17 15:24 GMT

ಕಾರ್ಕಳ, ಮೇ 17: ಸ್ಕಾರ್ಪಿಯೊ ಕಾರು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾ, ಕಾರ್ಕಳ ಪುರಸಭೆಯ ಕಮ್ಯುನಿಟಿ ಅಫೇರ್ ಆಫೀಸರ್ ಈಶ್ವರ ನಾಯ್ಕ (46) ಎಂಬವರು ಗಾಯಗೊಂಡಿದ್ದಾರೆ.

ಅತ್ತೂರು ಪದವಿನಲ್ಲಿರುವ ಮನೆಗೆ ಸೋಮವಾರ ಮಧ್ಯಾಹ್ನ ಊಟಕ್ಕೆ ತೆರಳುತ್ತಿರುವ ಸಂದರ್ಭ ಈ ಘಟನೆ ನಡೆದಿದೆ.

ಕಾಲುಗಳಿಗೆ ಗಂಭೀರ ಗಾಯಗೊಂಡ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News