ಎಸ್ಸೆಸ್ಸೆಲ್ಸಿ: ಮೂಡುಬಿದಿರೆ ವಲಯಕ್ಕೆ ಶೇ. 91.65 ಫಲಿತಾಂಶ

Update: 2016-05-18 14:04 GMT

ಮೂಡಬಿದಿರೆ, ಮೇ 18: ವಲಯದ 10 ಸರಕಾರಿ, 9 ಅನುದಾನಿತ ಹಾಗೂ 11ಅನುದಾನ ರಹಿತ ಹೀಗೆ ಒಟ್ಟು 30 ಪ್ರೌಢ ಶಾಲೆಗಳಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾದ  1832 ವಿದ್ಯಾರ್ಥಿಗಳ ಪೈಕಿ 1679 ವಿದ್ಯಾರ್ಥಿಗಳು ಉತೀರ್ಣರಾಗುವ ಮೂಲಕ ವಲಯಕ್ಕೆ ಶೇ 91.65 ಫಲಿತಾಂಶ ಲಭಿಸಿದ್ದು ಮೂಡಬಿದಿರೆ ವಲಯ ದ.ಕ. ಜಿಲ್ಲೆಯಲ್ಲೇ ಪ್ರಥಮ ಸ್ಥಾನದಲ್ಲಿದೆ.

6 ಅನುದಾನ ರಹಿತ, 2 ಸರಕಾರಿ ಹಾಗೂ 1 ಅನುದಾನಿತ ಪ್ರೌಢ ಶಾಲೆ ಹೀಗೆ ಶೇಕಡಾ ನೂರು ಫಲಿತಾಂಶ ಪಡೆದಿವೆ. ಸರಕಾರಿ ಪ್ರೌಢ ಶಾಲೆಗಳು ಶೇ 90.31 ಫಲಿತಾಂಶ ಪಡೆದು ಮುನ್ನಡೆ ದಾಖಲಿಸಿವೆ.

ಜೈನಪ್ರೌಢಶಾಲೆಯ ಆಂಗ್ಲ ಮಾಧ್ಯಮದ ಶಿಲ್ಪಾ ಜೆ. ಶೆಟ್ಟಿ , ಇರುವೈಲು ಅವರು 621 ಅಂಕಗಳನ್ನು ಪಡೆದು ವಲಯಕ್ಕೆ ಅಗ್ರಸ್ಥಾನ ಗಳಿಸಿದ್ದಾರೆ. ಆಳ್ವಾಸ್‌ನ ಚಿನ್ಮಯ್ (619), ಸುಪ್ರಿಯಾ ಸಂತೋಷ್ ಶೆಟ್ಟಿ, ಕಾವ್ಯ ಆರಾಧ್ಯ (ತಲಾ 618) ಅಂಕಗಳನ್ನು ಪಡೆದು ವಲಯದಲ್ಲಿ ಮೊದಲ ಮೂರು ಸ್ಥಾನ ಪಡೆದಿದ್ದಾರೆ.
 

ಸರಕಾರಿ ಪ್ರೌಢಶಾಲೆಗಳು: ಮೂಡು ಮಾರ್ನಾಡು (ಶೇ. 100), ಕಲ್ಲಬೆಟ್ಟು ಮೊರಾರ್ಜಿ ದೇಸಾಯಿ ವಸತಿ ಶಾಲೆ (100), ಸರಕಾರಿ ಪ್ರಾಂತ್ಯ (ಶೇ . 97.87), ಹೊಸಬೆಟ್ಟು (ಶೇ. 93.33), ಪಡುಕೊಣಾಜೆ (ಶೇ. 91.67), ನೆಲ್ಲಿಕಾರು (ಶೇ. 90.32), ಅಳಿಯೂರು (ಶೇ 87.27), ದರೆಗುಡ್ಡೆ (ಶೇ. 85.19), ನೀರ್ಕೆರೆ (ಶೇ. 83.78) ಹಾಗೂ ಮಿಜಾರು ಸರಕಾರಿ ಪ್ರೌಢಶಾಲೆ (73.68 ) ಉತ್ತಮ ಸಾಧನೆ ತೋರಿವೆ.

ಅನುದಾನಿತ:  
ಆದರ್ಶ ಪ್ರೌಢಶಾಲೆ ತಾಕೊಡೆ (ಶೇ. 100) ಜವಾಹರಲಾಲ ನೆಹರೂ ಪ್ರೌಢಶಾಲೆ ಶಿರ್ತಾಡಿ (ಶೇ .97.44) , ಮುಕ್ತಿಪ್ರಕಾಶ ಪ್ರೌಢಶಾಲೆ ನೀರುಡೆ (ಶೇ. 95.12) ಸರ್ವೋದಯ ಪ್ರೌಢಶಾಲೆ ಕಲ್ಲಮುಂಡ್ಕೂರು (ಶೇ 92.11) ಜೈನ ಪ್ರೌಢಶಾಲೆ ಮೂಡಬಿದಿರೆ (ಶೇ. 89.72), ಹೋಲಿ ರೋಸರಿ ಪ್ರೌಢಶಾಲೆ ಮೂಡಬಿದಿರೆ (ಶೇ. 88.31), ಎಸ್‌ಎಂಪಿ ಬೆಳುವಾಯಿ (ಶೇ.84.78) ಸುಬ್ರಹ್ಮಣ್ಯ ಸ್ವಾಮಿ ಪ್ರೌಢಶಾಲೆ ಕಡಂದಲೆ (ಶೇ. 76)ಬಾಬು ರಾಜೇಂದ್ರ ಪ್ರೌಢಶಾಲೆ ಮೂಡಬಿದಿರೆ ( ಶೇ. 75.24), ಅನುದಾನ ರಹಿತ:
    ರೋಟರಿ ಆಂಗ್ಲ ಮಾಧ್ಯಮ ( ಶೇ. 100), ಸೈಂಟ್ ಥಾಮಸ್ ಆ.ಮಾ. ಆಲಂಗಾರು ( ಶೇ. 100) ಆಳ್ವಾಸ್ ಕನ್ನಡ ಮಾಧ್ಯಮ (ಶೇ. 100) ಬ್ಲಾಸಮ್ ಆಂಗ್ಲ ಮಾಧ್ಯಮ , ಬೆಳುವಾಯಿ (ಶೇ. 100), ಡಿ.ಜೆ. ಆಂಗ್ಲಮಾಧ್ಯಮ ಪ್ರೌಢಶಾಲೆ ಮೂಡಬಿದಿರೆ (ಶೇ . 100), ಮೌಂಟ್ ಕಾರ್ಮೆಲ್ ಆಂಗ್ಲ ಮಾಧ್ಯಮ ಶಿರ್ತಾಡಿ ( ಶೇ . 100) ಆಳ್ವಾಸ್ ಆಂಗ್ಲಮಾಧ್ಯಮ ಪ್ರೌಢಶಾಲೆ ( ಶೇ. 99.20) ಮಹಮ್ಮದೀಯ ಪ್ರೌಢಶಾಲೆ, ಕೋಟೆ ಬಾಗಿಲು (ಶೇ. 94.44) ಎಕ್ಸಲೆಂಟ್ ಪ್ರೌಢಶಾಲೆ ಕಲ್ಲಬೆಟ್ಟು (ಶೇ. 71.05) ದುರ್ಗಾದೇವಿ ಪ್ರೌಢಶಾಲೆ ಆ.ಮಾ. ನಿಡ್ಡೋಡಿ (ಶೇ. 48.28), ಸರಸ್ವತಿ ಪ್ರೌಢಶಾಲೆ ಇರುವೈಲು (ಶೇ. 41.67 ) ಫಲಿತಾಂಶ ಪಡೆದಿವೆ ಎಂದು ಕ್ಷೇತ್ರ ಶಿಕ್ಷಣಾಕಾರಿಗಳ ಪ್ರಕಟಣೆ ತಿಳಿಸಿದೆ.

ಸಚಿವ ಅಭಯಚಂದ್ರ ಅಭಿನಂದನೆ
ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ಮೂಡಬಿದಿರೆ ವಲಯವು 91.65 ಶೇ. ಉತ್ತೀರ್ಣತೆ ಸಾಸಿ ದ.ಕ. ಜಿಲ್ಲೆಯಲ್ಲೇ ಪ್ರಥಮ ಸ್ಥಾನ ಗಳಿಸಿರುವುದಕ್ಕಾಗಿ ಕ್ಷೇತ್ರಶಾಸಕ, ಯುವಸಬಲೀಕರಣ ಮತ್ತು ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಅವರು ವಿದ್ಯಾರ್ಥಿಗಳು, ಶಿಕ್ಷಕರು , ಕ್ಷೇತ್ರ ಶಿಕ್ಷಣಾಕಾರಿ ಹಾಗೂ ಸಿಬಂದಿಗಳು ಹಾಗೂ ವಿದ್ಯಾರ್ಥಿಗಳ ಪೋಷಕರನ್ನು ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News