ಇದು ಅನಿರೀಕ್ಷಿತ ಸೋಲು: ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ

Update: 2016-05-19 12:44 GMT

ತಿರುವನಂತಪುರಂ, ಮೇ 19: ಇದು ಅನಿರೀಕ್ಷಿತ ಸೋಲು ಎಂದು ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಹೇಳಿದ್ದಾರೆ. ಏನಿದ್ದರೂ ಈ ಸೋಲನ್ನು ಅಂಗೀಕರಿಸುವೆ. ಸೋಲಿನಲ್ಲಿ ಪಕ್ಷಕ್ಕೂ ಯುಡಿಎಫ್‌ಗೂ ಪಾಲಿದೆ. ಅದಕ್ಕಿಂತ ಹೆಚ್ಚು ತನ್ನ ಪಾಲಿದೆ ಎಂದು ಅವರು ಪತ್ರಕರ್ತರಿಗೆ ತಿಳಿಸಿದ್ದಾರೆ. ಎಲ್ಲ ವಿಷಯಗಳನ್ನೂ ಗಂಭೀರವಾಗಿ ಚರ್ಚಿಸಲಾಗುವುದು. ಕಾಂಗ್ರೆಸ್ ಅತ್ಯಂತ ಬಲಿಷ್ಠ ಪಕ್ಷವಾಗಿದೆ. ಕಾಂಗ್ರೆಸ್‌ನ ನೇತೃತ್ವದಲ್ಲಿ ಯುಡಿಎಫ್ ಮತ್ತೆ ಶಕ್ತಿಯನ್ನು ಸಂಚಯಿಸಿಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ. ಪುದುಪಳ್ಳಿಯ ಜನರು ತಾನು ಸ್ಪರ್ಧಿಸಿದಾಗ ಬಹಳ ಉದಾರ ನಿಲುವನ್ನು ತಾಳಿದ್ದಾರೆ ಎಂದೂ ಉಮ್ಮನ್ ಚಾಂಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News