ಕಟ್ಟಡ ಕಾರ್ಮಿಕರಿಗೆ ವಿವಿಧ ಸೌಲಭ್ಯಗಳ ವಿತರಣೆ

Update: 2016-05-20 18:30 GMT

ಬೈಂದೂರು, ಮೇ 20: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಬೈಂದೂರು ವಲಯದ ಯಡ್ತರೆ ಗ್ರಾಮ ಸಮಿತಿಯ ಕಟ್ಟಡ ಕಾರ್ಮಿಕರಿಗೆ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಮಂಜೂರಾಗಿರುವ ವಿವಿಧ ಸೌಲಭ್ಯ ಹಾಗೂ ಸಹಾಯಧನವನ್ನು ಇತ್ತೀಚೆಗೆ ಬೈಂದೂರು ಸಿಐಟಿಯು ಕಛೇರಿಯಲ್ಲಿ ವಿತರಿ ಸಲಾಯಿತು.
ಕಟ್ಟಡ ಕಾರ್ಮಿಕರ ಮಕ್ಕಳ ಮದುವೆಗೆ ಧನ ಸಹಾಯ, ವಿದ್ಯಾರ್ಥಿ ವೇತನ, ಹಾಗೂ ವೈದ್ಯಕೀಯ ಚಿಕಿತ್ಸೆಗೆ ಸಹಾಯಧನ ಮಂಜೂ ರಾತಿ ಆದೇಶ ಪತ್ರ ವನ್ನು ಕಟ್ಟಡ ಕಾರ್ಮಿಕರ ಸಂಘದ ಬೈಂದೂರು ವಲಯದ ಅಧ್ಯಕ್ಷ ಗಣೇಶ ತೊಂಡೆಮಕ್ಕಿ ಕಟ್ಟಡ ಕಾರ್ಮಿಕರಿಗೆ ಹಸ್ತಾಂ ತರಿಸಿದರು. ಈ ಸಂದರ್ಭದಲ್ಲಿ ಸಿಐಟಿಯು ತಾಲೂಕು ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ, ಮುಖಂಡರಾದ ಗಣೇಶ ಮೊಗವೀರ ವಿದ್ಯಾ ನಗರ, ರೋನಿ ನಜರತ್ ಪಡುವರಿ, ಮಾರಿ ಮೊಗವೀರ ಯಡ್ತರೆ, ವಿಕ್ಟರ್‌ಡಾಯಸ್ ಯಡ್ತರೆ, ಮಂಜುನಾಥ ಶೇರೆಗಾರ್ ಬಿಜೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News