6 ಮಂದಿ ಆರೆಸ್ಸೆಸ್ಸ್ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು
ಕಾಸರಗೋಡು,ಮೇ 22: ಚುನಾವಣಾ ವಿಜಯೋತ್ಸವ ಸಂದರ್ಭದಲ್ಲಿ ಕಾನ್ಚಾನ್ಗಾಡ್ ಶಾಸಕ ಇ. ಚಂದ್ರಶೇಖರನ್ ರವರ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರು ಮಂದಿಯನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮಾವುಂಗಾಲ್ ಮೇಲನಡ್ಕದ ಬಾಲರಾಮ ( 24) , ಆಟೋ ಚಾಲಕ ಎಂ . ರಾಜೇಶ್ ( 30), ಎಸ್. ಸುಧೀಶ್ ( 24) , ಅಜನೂರು ಕಾಟ ಕುಳ೦ಗರದ ಬಾಬು ( 47), ರಾಹುಲ್ ( 18) ಎಂ . ಅರುಣ್ (೧೮) ಎಂದು ಗುರುತಿಸಲಾಗಿದೆ.
ಬಂಧಿತರು ಆರ್ ಎಸ್ ಎಸ್ ಕಾರ್ಯಕರ್ತರೆಂದು ಪೊಲೀಸರು ತಿಳಿಸಿದ್ದಾರೆ.
ಮೇ 19 ರಂದು ಸಂಜೆ ಘಟನೆ ನಡೆದಿತ್ತು . ಕಾನ್ಚಾನ್ಗಾಡ್ ವಿಧಾನಸಭಾ ಕ್ಷೇತ್ರದಿಂದ ಎಲ್ ಡಿ ಎಫ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ಇ . ಚಂದ್ರಶೇಖರನ್ ರವರ ವಿಜಯೋತ್ಸವ ಮೆರವಣಿಗೆ ಸಂದರ್ಭದಲ್ಲಿ ಗುಂಪೊಂದು ಅಡ್ಡಿ ಪಡಿಸಿ ಕಲ್ಲು ಹಾಗೂ ಇನ್ನಿತರ ವಸ್ತುಗಳನ್ನು ಎಸೆದಿದ್ದ ಕಾರಣ ವಿಜಯೋತ್ಸವ ಹಿಂಸಾಚಾರಕ್ಕೆ ತಿರುಗಿತ್ತು. ಈ ಸಂದರ್ಭದಲ್ಲಿ ಕಾನ್ಚಾನ್ಗಾಡ್ ಶಾಸಕ ಇ. ಚಂದ್ರಶೇಖರನ್ , ಮುಖಂಡರಾದ ಎ . ಕೆ. ನಾರಾಯಣನ್ , ಟಿ. ಕೆ ರವಿ , ಕೆ . ವಿ ಕೃಷ್ಣನ್ ಗಾಯಗೊಂಡಿದ್ದರು. ಶಾಸಕ ಇ . ಚಂದ್ರಶೇಖರನ್ ರವರ ಕೈ ಗೆ ತೀವ್ರ ಸ್ವರೂಪದ ಗಾಯವಾಗಿತ್ತು. ಮಾವುಂಗಾಲ್ ಜಂಕ್ಷನ್ ಬಳಿ ಪೊಲೀಸರು ಅಳವಡಿಸಿದ್ದ ಕ್ಯಾಮಾರದ ದ್ರಶ್ಯ ಗಳ ಮೂಲಕ ಆರೋಪಿಗಳ ಗುರುತು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು , ಇದರಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ