ತಮಿಳುನಾಡಿನಲ್ಲಿ ಬಾರ್ಗಳನ್ನು ಮುಚ್ಚಲು ಅಮ್ಮ ಹುಕುಂ
Update: 2016-05-23 13:50 IST
ಚೆನ್ನೈ, ಮೇ 23: ಜೆ. ಜಯಲಲಿತಾ ಅವರು ಮುಖ್ಯ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೆ 500 ಬಾರ್ಗಳನ್ನು ಮುಚ್ಚಲು ಆದೇಶ ಹೊರಡಿಸಿದ್ದಾರೆ.
ಮದ್ಯದಂಗಡಿಗಳನ್ನು ಮುಚ್ಚಲು ಎರಡು ಗಂಟೆಗಳ ಗಡುವು ವಿಧಿಸಿರುವ ಜಯ ಲಲಿತಾ ಚುನಾವಣೆಯ ಪೂರ್ವದಲ್ಲಿ ಜನತೆಗೆ ನೀಡಲಾಗಿದ್ದ ಭರವಸೆಯನ್ನು ಈಡೇರಿಸುವ ಕಡೆಗೆ ಹೆಜ್ಜೆ ಇರಿಸಿದ್ದಾರೆ.