ಮೇ 25ರಂದು ಮೂಳೂರು ಮರ್ಕಝಿನಲ್ಲಿ ಇಹ್ಸಾನ್ ಎಜು ಪ್ಲಾನೆಟ್ ನೂತನ ಕೋರ್ಸ್ ಆರಂಭ

Update: 2016-05-23 15:07 GMT

ಉಡುಪಿ, ಮೇ 23: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್‌ನ ಅಧೀನ ಸಂಸ್ಥೆಯಾದ ಮೂಳೂರು ಮರ್ಕಝ್ ತಅ್ಲೀಮಿಲ್ ಇಹ್ಸಾನಿನಲ್ಲಿ ನೂತನ ಇಹ್ಸಾನ್ ಎಜು ಪ್ಲಾನೆಟ್ ವಿಭಾಗ ಮೇ 25ರಂದು ಶುಭಾರಂಭಗೊಳ್ಳಲಿದೆ.

ಎಸೆಸೆಲ್ಸಿ ನಂತರದ ವಿದ್ಯಾರ್ಥಿಗಳಿಗೆ ಉನ್ನತವಾದ ಧಾರ್ಮಿಕ ಮತ್ತು ಲೌಕಿಕ ವಿದ್ಯಾಭ್ಯಾಸವನ್ನು ಉಚಿತವಾಗಿ ನೀಡಿ ನಂತರ ಅವರನ್ನು ಧಾರ್ಮಿಕವಾಗಿ ಇಲ್ಲವೇ ಲೌಕಿಕವಾಗಿ ಉನ್ನತ ಹುದ್ದೆಗಳಿಗೆ ತರಬೇತಿ ನೀಡುವ ಈ ಕೋರ್ಸಿನ 15 ವಿದ್ಯಾರ್ಥಿಗಳ ಪ್ರಥಮ ಬ್ಯಾಚ್ ಇದಾಗಿರುತ್ತದೆ.

ಮೇ 25ರಂದು ಬೆಳಗ್ಗೆ 10 ಗಂಟೆಗೆ ಪ್ರಾರಂಭವಾಗುವ ಕಾರ್ಯಕ್ರಮದಲ್ಲಿ ಕುಂಬೋಲ್ ಅಸೈಯದ್ ಮುಖ್ತಾರ್ ತಂಙಳ್ ದುಆ ನೆರವೇರಿಸಲಿದ್ದು ಜಾಮಿಯಾ ಸಅದಿಯಾ ಅರೆಬಿಯಾದ ಕಾರ್ಯದರ್ಶಿ ಎ.ಪಿ. ಅಬ್ದುಲ್ಲಾ ಮುಸ್ಲಿಯಾರ್ ಮಾಣಿಕೋತ್ ಉದ್ಘಾಟಿಸಲಿದ್ದಾರೆ. ಸಮಾರಂಭದಲ್ಲಿ ಇತರ ಸಾದಾತ್‌ಗಳು ಗಣ್ಯರೂ ಭಾಗವಹಿಸಲಿದ್ದರೆಂದು ಮೆನೇಜರ್ ಮುಸ್ತಫಾ ಸಅದಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News