ರಿಯಾದ್‌ನಲ್ಲಿ ವಾಹನ ಅಪಘಾತ ಪುತ್ತೂರು ನಿವಾಸಿ ಮೃತ್ಯು

Update: 2016-05-24 13:52 GMT

ಪುತ್ತೂರು, ಮೇ 24: ಸೌದಿ ಅರೇಬಿಯಾದ ರಿಯಾದ್‌ನಲ್ಲಿ ನಡೆದ ವಾಹನ ಅಪಘಾತದಲ್ಲಿ ಪುತ್ತೂರು ತಾಲೂಕಿನ ಸವಣೂರು ಗ್ರಾಮದ ಮಾಂತೂರು ನಿವಾಸಿ ಯುವಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.

ಮಾಂತೂರು ನಿವಾಸಿ ಸವಣೂರು ಗ್ರಾ.ಪಂನ ಮಾಜಿ ಉಪಾಧ್ಯಕ್ಷೆ ಝೌರಾಬಿ ಮತ್ತು ಅಬೂಬಕರ್ ದಂಪತಿಯ ಪುತ್ರ ಶಾಫಿ ಸವಣೂರು(30) ಮೃತಪಟ್ಟ ಯುವಕ.

ಶಾಫಿ ಕಳೆದ ಹಲವು ವರ್ಷಗಳಿಂದ ರಿಯಾದ್‌ನಲ್ಲಿ ಉದ್ಯೋಗದಲ್ಲಿದ್ದು ಸೋಮವಾರ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೃತರು ತಂದೆ, ತಾಯಿ, ಇಬ್ಬರು ಸಹೋದರರು ಹಾಗೂ ಓರ್ವ ಸಹೋದರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News