ಕುತ್ತಾರು: ಅಕ್ರಮ ಗೋಸಾಗಾಟದ ವಾಹನ ಪೊಲೀಸ್ ವಶಕ್ಕೆ

Update: 2016-05-27 13:17 GMT

ಉಳ್ಳಾಲ, ಮೇ 27: ಕುತ್ತಾರು ಸಮೀಪದ ರಾಣಿಪುರದ ಬರುವ ಎಂಬಲ್ಲಿಂದ ಎರಡು ಹೋರಿಗಳನ್ನು ತುಂಬಿಸಿ ತೊಕ್ಕೊಟ್ಟಿನ ಕಡೆ ಸಾಗಿಸುತ್ತಿದ್ದ ಪಿಕ್‌ಅಪ್ ವಾಹನವನ್ನು ಭಜರಂಗದಳದ ಕಾರ್ಯಕರ್ತರು ತಡೆದು ನಿಲ್ಲಿಸಿ, ವಾಹನ ಸಮೇತ ಚಾಲಕನನ್ನು ಉಳ್ಳಾಲ ಠಾಣಾ ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ಶುಕ್ರವಾರ ನಡೆದಿದೆ.

ಮಂಜನಾಡಿಯ ಸಿದ್ಧೀಕ್(25)ಬಂಧಿತ ಪಿಕ್ ಅಪ್ ಚಾಲಕ. ಈತ ಶುಕ್ರವಾರ ಬೆಳಗ್ಗೆ ರಾಣಿಪುರ ಬರುವದಿಂದ ಕೆಎ-19-ಸಿ-7754 ನೋಂದಣಿಯ ಪಿಕ್‌ಅಪ್ ವಾಹನದಲ್ಲಿ ಎರಡು ಹೋರಿಗಳನ್ನು ತುಂಬಿಸಿ ತೊಕ್ಕೊಟ್ಟಿನ ಕಡೆ ಸಾಗಿಸುತ್ತಿದ್ದ ವೇಳೆ ಕುತ್ತಾರುವಿನಲ್ಲಿ ಅಡ್ಡಗಟ್ಟಿದ ಬಜರಂಗದಳದ ಕಾರ್ಯಕರ್ತರು ಹೋರಿಗಳನ್ನು ಮತ್ತು ಚಾಲಕನನ್ನು ಹಿಡಿದು ಉಳ್ಳಾಲ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ಪೊಲೀಸರು ಆರೋಪಿ ಸಿದ್ಧೀಕ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News