×
Ad

ಕಾಸರಗೋಡು : ನೀರು ಬತ್ತಿದ ಬಾವಿಯಲ್ಲಿ ಯುವಕನ ಅಸ್ಥಿಪಂಜರ ಪತ್ತೆ

Update: 2016-05-29 12:31 IST

ಕಾಸರಗೋಡು, ಮೇ 29:  ನೀರು ಬತ್ತಿದ ಬಾವಿಯಲ್ಲಿ ಯುವಕನೋರ್ವನ ಅಸ್ಥಿಪಂಜರ ಪತ್ತೆಯಾದ ಘಟನೆ ಪೆರ್ಲ ದಲ್ಲಿ ನಡೆದಿದೆ.
ಪೆರ್ಲ ಏಳ್ಕಾನದ  ರಾಮ ( 30) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಕೂಲಿ ಕಾರ್ಮಿಕರಾಗಿದ್ದ ಅವರು  ಹಲವೆಡೆ ಕೆಲಸಕ್ಕೆ ತೆರಳುತ್ತಿದ್ದರು. ಕೆಲಸಕ್ಕೆಂದು ತೆರಳುತ್ತಿದ್ದ ಅವರು ಕೆಲ ತಿಂಗಳ ಬಳಿಕ ಮನೆಗೆ ಮರಳುತ್ತಿದ್ದರು.

ಇದರಿಂದ  ಮನೆಯವರು  ಅವರ ಬಗ್ಗೆ ಗಂಭೀರವಾಗಿ ಗಮನಹರಿಸುತ್ತಿರಲಿಲ್ಲ . ಈ ನಡುವೆ ಮನೆಗೆ ತೆರಳುವ ದಾರಿ ನಡುವಿನ  ಸುಮಾರು 15  ಅಡಿಯ ಬಾವಿಯಲ್ಲಿ  ಕೊಳೆತ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿದೆ. ಬದಿಯಡ್ಕ ಪೊಲೀಸರು ಸ್ಥಳಕ್ಕೆ ತೆರಳಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News