ಲೇಡಿಗೋಷನ್ ಬಳಿ ಅಪಘಾತ: ಗಾಯಾಳು ಬಾಲಕ ಮೃತ್ಯು
Update: 2016-05-29 22:03 IST
ಮಂಗಳೂರು, ಮೇ 29: ನಗರದ ಲೇಡಿಗೋಷನ್ ಆಸ್ಪತ್ರೆ ಬಳಿ ರಸ್ತೆ ದಾಟುವಾಗ ಬಸ್ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕ ಇಂದು ಮೃತಪಟ್ಟಿದ್ದಾನೆ.
ಅಸೈಗೋಳಿಯ ನಿವಾಸಿ ಅಶೋಕ್ ಎಂಬವರ ಪುತ್ರ ಆಶಿಶ್ (10) ಮೃತ ಬಾಲಕ.
ಈತ ಮೇ 22ರಂದು ಶಾಲಾ ಸಮವಸ್ತ್ರವನ್ನು ಖರೀದಿಸಲೆಂದು ನಗರಕ್ಕೆ ಬಂದಿದ್ದ. ಸಮವಸ್ತ್ರವನ್ನು ಖರೀದಿಸಿ ಲೇಡಿಗೋಷನ್ ಬಳಿ ರಸ್ತೆ ದಾಟುತ್ತಿದ್ದಾಗ ಬಸ್ಸೊಂದು ಢಿಕ್ಕಿ ಹೊಡೆದಿತ್ತು. ಗಂಭೀರ ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾನೆ.
ಮಂಗಳೂರು ಸಂಚಾರಿ ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.