ಕೊಲೆಯಾದ ಬಾಲಕನ ಮನೆಯವರನ್ನು ಭೇಟಿಯಾಗಿ ಸಂತೈಸಿದ ಶಾರ್ಜಾ ದೊರೆ

Update: 2016-05-30 13:22 GMT

ಶಾರ್ಜಾ, ಮೇ 30 : ಇತ್ತೀಚಿಗೆ ಲೈಂಗಿಕ ಕಿರುಕುಳಕ್ಕೆ ಒಳಗಾಗಿ ಶವವಾಗಿ ಪತ್ತೆಯಾದ ೮ ವರ್ಷದ ಬಾಲಕ ಉಬೈದ ಇಬ್ರಾಹಿಮ್ ನ ಹೆತ್ತವರನ್ನು  ಶಾರ್ಜಾದ ದೊರೆ ಡಾ. ಶೇಖ್ ಸುಲ್ತಾನ್ ಬಿನ್ ಮುಹಮ್ಮದ್ ಅಲ್ ಖಾಸಿಮಿ ಅವರೇ ಸ್ವತಹ ಭೇಟಿಯಾಗಿ ಸಂತಾಪ ಸೂಚಿಸಿ ಧೈರ್ಯ ತುಂಬಿದ್ದಾರೆ. 

ದುರಂತಕ್ಕೆ ತೀವ್ರ ಸಂತಾಪ್ ವ್ಯಕ್ತ ಪಡಿಸಿದ ದೊರೆ ಶೇಖ್ ಸುಲ್ತಾನ್ ಅವರು ನಾನು ಈ ಸಂದರ್ಭದಲ್ಲಿ ಕುಟುಂಬದ ಜೊತೆ ಇದ್ದೇನೆ ಎಂದು ಹೇಳಿದರು. 

ಸ್ವತಹ ದೊರೆಯೇ ಬಂದು ಸಂತಾಪ ಸೂಚಿಸಿದ್ದಕ್ಕೆ ಬಾಲಕನ ತಂದೆ ಭಾವುಕರಾಗಿ ಧನ್ಯವಾದ ಸಲ್ಲಿಸಿದರು. 

ಮೇ 20 ರಂದು ಬಾಲಕನನ್ನು ಆಮಿಷ ಒಡ್ಡಿ ಅಪಹಿರಿಸಿದ್ದ ಜೋರ್ಡಾನ್ ಪ್ರಜೆ ಆತನಿಗೆ ಲೈಂಗಿಕ ಕಿರುಕುಳ ನೀಡಿ ಬಳಿಕ ಕೊಂದು ಶವವನ್ನು ಬಿಸಾಡಿದ್ದ. ಬಾಲಕ ಕೂಡ ಜೋರ್ಡಾನ್ ಮೂಲದವನು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News